ಖಾನಾಪುರ:ಕಳೆದ ಮೂವತ್ತು ವರ್ಷಗಳಿಂದ ಸುಮಾರು ಇಪ್ಪತ್ತು ಕುಟುಂಬಗಳು ಪ್ರಭುನಗರದ ಜನತಾ ಪ್ಲಾಟಿನಲ್ಲಿವಾಸವಾಗಿದ್ದು 1994-95ರಲ್ಲಿ ತಹಶಿಲ್ದಾರ ಅವರು ಕೆಲ ಕುಟುಂಬಗಳಿಗೆ ಮಾತ್ರ ಹಕ್ಕು ಪತ್ರ ನೀಡಿರುತ್ತಾರೆ ಆದರೆ ಬಾಕಿ ಕುಟುಂಬಗಳು ಅಲ್ಲೇ ಮನೆ ಕಟ್ಟಿಕೊಂಡು ಗ್ರಾಮ ಪಂಚಾಯತಿಯ ಕರ ತುಂಬುತ್ತಾ ಬಂದಿರುತ್ತಾರೆ ಆದರೆ ಅವರಿಗೆ ಇ ಸ್ವತ್ತು ಪಹಣಿ ಸಲುವಾಗಿ ಸಾಕಷ್ಟು ಬಾರಿ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಇ-ಸ್ವತ್ತುನೀಡಲು ನಿರಾಕರಿಸುತ್ತಿದ್ದಾರೆ ಹೀಗಾಗಿ ಅಲ್ಲಿ ವಾಸಿಸುತ್ತಿರುವ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ಲಿನ ಜನ ತಾಲ್ಲೂಕು ಪಂಚಾಯತ ಕಛೇರಿ ಮುಂದೆ ಪ್ರತಿಭಟನೆ ನಡೆಸಿ
ಈ ಸಂದರ್ಭದಲ್ಲಿ ಮಾತನಾಡಿದ ಸಂದೀಪ ಛಲವಾದಿ ಸರ್ಕಾರವೇ ಆ ಜನರಿಗೆ ನಿವೇಶನ ನೀಡಿದೆ ಆದರೆ ಅಧಿಕಾರಿಗಳು ಪಹಣಿ ನೀಡದೆ ಆ ಬಡ ಕುಟುಂಬಗಳಿಗೆ ಅನ್ಯಾಯ ಮಾಡುತ್ತಿದ್ದು ತಕ್ಷಣವೇ ಅವರಿಗೆ ಇ-ಸ್ವತ್ತು ಪಹಣಿ ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ಸಂದೀಪ ಛಲವಾದಿ, ರಾಜಶೇಖರ ಹಿಂಡಲಗಿ,ಶರದ್ ಹೊನೈಕ್, ಆಕಾಶ ಅಷ್ಟಗೇಕರ ಮತ್ತು ಪ್ರಭು ನಗರ ಗ್ರಾಮಸ್ಥರು ಉಪಸ್ಥಿತರಿದ್ದರು