ಬೆಳಗಾವಿಬೆಳಗಾವಿ ನಗರ

ದೀಪಕ ಗುಡಗನಟ್ಟಿ : ಕರ್ನಾಟಕ ಸರಕಾರ  ಮಹಾ ಸಿಎಂ  ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು

ಬೆಳಗಾವಿ: ಮಹಾರಾಷ್ಟ್ರದ ಸಿಎಂ ಏಕನಾಥ ಶಿಂದೆ ಪ್ರತಿಕೃತಿ ದಹನ ಮಾಡಿ ಮರಾಠಿ ಭಾಷಿಕ ಪುಂಡರ ವಿರುದ್ಧ ಬೆಳಗಾವಿಯಲ್ಲಿಂದು   ಕರವೇಯಿಂದ  ಬೃಹತ್ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಹಾರಾಷ್ಟ್ರ ಪಾಸಿಂಗ್ ಹೊಂದಿದ್ದ ಗೂಡ್ಸ್ ವಾಹನ ಮೇಲೆ ಏಕಾಏಕಿ ಕರವೇ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ ಪಾಸಿಂಗ್ ಇದ್ದ ವಾಹನಕ್ಕೆ ಕಪ್ಪು ಮಸಿ ಬಳಿದು ವೈಪರ್ ಮುರಿದು ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗೆ ಕಪ್ಪುಮಸಿ ಬಳಿದು ಮರಾಠಿ ಭಾಷಿಕ ಪುಂಡರು ನಡೆಸುತ್ತಿರುವ ಪುಂಡಾಟಿಕೆಯನ್ನು ಖಂಡಿಸಿ, ಮಹಾಂತೇಶ ನಗರದ‌ ರಾಷ್ಟ್ರೀಯ ಹೆದ್ದಾರಿ ತಡೆದು ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.
ಈ  ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರು ಮಾತನಾಡಿ ಮಹಾರಾಷ್ಟ್ರದ ಸಿಎಂ ಏಕನಾಥ ಶಿಂದೆ ಪ್ರತಿಕೃತಿ ದಹನ ಮಾಡಿ ಹೋರಾಟವನ್ನು  ಮಾಡುತ್ತಿದ್ದೇವೆ, ನಮ್ಮ ಜಿಲ್ಲೆಯ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಬೆಳಗಾವಿ ಗಡಿ ವಿಚಾರವಾಗಿ ಯಾರು ತುಟಿ ಬಿಚ್ಚುತ್ತಿಲ್ಲ, ನೀವು ಕನ್ನಡಿಗರ ಮತವನ್ನು ಪಡೆದುಕೊಂಡು ಕರ್ನಾಟಕ ಸರಕಾರದ ಅಧಿಕಾರವನ್ನು ಅನುಭವಿಸಿತ್ತಿದ್ದೀರಾ ನೀವೆಲ್ಲ ನಮ್ಮ ನಾಡಿನ ಸಲುವಾಗಿ ಮಾತನಾಡಬೇಕು . ಅದನ್ನು ಬಿಟ್ಟು ನಮ್ಮ ನಾಡಿನ ಪರವಾಗಿ ನಮ್ಮ ಭಾಷೆಯ ಪರವಾಗಿ ಬೇರೆ ಭಾಷಿಕರು ತಮಗೆ ವೋಟ್ ಹಾಕುವದಿಲ್ಲ ಎಂದು ನೀವೇನಾದರೂ ತಿಳಿದುಕೊಂಡಿದ್ದರೆ ನಾವು ಕೂಡ ಇನ್ನು ಜಾಗೂರುಕರಾಗ ಬೇಕಾಗುತ್ತದೆ, ಕನ್ನಡಿಗರು ಕರ್ನಾಟಕ ರಕ್ಷಣಾ ವೇದಿಕೆ ಬರುವ ಚುನಾವಣೆಯಲ್ಲಿ ಮನೆ ಮನೆ ತೆರಳಿ ಜಾಗೃತಿ ಮೂಡಿಸುವಂತಹ ಕೆಲವನ್ನು ಮಾಡ್ತೀವಿ, ಮನೆ ಮನೆಗೆ ತೆರಳಿ ಪ್ರಚಾರವನ್ನು ಮಾಡುತ್ತೇವೆ. ಯಾವ ಜನಪ್ರತಿನಿಧಿ ನಾಡುನುಡಿಗಾಗಿ ನಿಲ್ಲತ್ತಾರೋ  ಕನ್ನಡಿಗರ ಪರವಾಗಿ ನಿಲ್ಲುತ್ತಾರೋ  ಅಂತವರಿಗೆ ಮಾತ್ರ ನಾವು ಮತವನ್ನು ಹಾಕುವ ಕೆಲಸ ಮಾಡುತ್ತೇವೆ , ಇಂದು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡ್ತೀವಿ ತಕ್ಷಣವೇ ಸರ್ವ ಪಕ್ಷಗಳ ಸಭೆಯನ್ನು ಕರೆದು, ದೆಹಲಿಗೆ ಸರ್ವ ಪಕ್ಷಗಳ  ನಿಯೋಗ ಕರೆದುಕೊಂಡು ಹೋಗಿ ಕೇಂದ್ರದಿಂದ ಮಹಾ ಸಿಎಂ ಏಕನಾಥ್ ಶಿಂದೆ ಅವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು. ಮಹಾ ಸರಕಾರ ಮರಾಠಿ ಗುಂಡಾಗಳಿಂದ  ಕಾನೂನು ಸುವ್ಯವಸ್ಥೆ ಹದಿಗೇಡಿಸುವ ಕೆಲಸ ಮಾಡುತ್ತಿದೆ  ಅದನ್ನು ತಡೆಯುವ ಕೆಲಸ ಮಾಡಬೇಕು,ಪ್ರಧಾನಿ ಮೋದಿ ಅವರು ಮದ್ಯಸ್ಥಿಕೆ ವಹಿಸಿ  ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ .
ಇದೆ ವೇಳೆ ಗೂಡ್ಸ್ ವಾಹನದ ಮುಂಭಾಗದ ಗಾಜು ಒಡೆಯಲು ಕರವೇ ಕಾರ್ಯಕರ್ತರ ಯತ್ನಿಸಿದರು .  ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ಮಧ್ಯೆ ತಳ್ಳಾಟ ನೂಕಾಟ ನಡೆದಿದೆ. ಪ್ರತಿಭಟನೆ ಯಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವಿಸ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‌ಪ್ರತಿಭಟನೆ ಹಿನ್ನಲೆಯಲ್ಲಿ ಪುಣೆಯಿಂದ-ಬೆಂಗಳೂರಿಗೆ ಹೊರಡುವ ಪ್ರಯಾಣಿಕರು ಪರದಾಡಿದ್ದಾರೆ.‌
ಕರವೇ ಜಿಲ್ಲಾ ಅಧ್ಯಕ್ಷ , ದೀಪಕ ಗುಡಗನಟ್ಟಿ, ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಗಣೇಶ ರೋಕಡೆ,  ಸತೀಶ ಗಾಡಿವಡ್ಡರ, ಬಾಳು ಜಡಗಿ  ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
TV24 News Desk
the authorTV24 News Desk

Leave a Reply