ಬೆಳಗಾವಿಬೆಳಗಾವಿ ನಗರ

ಡೇ ನೈಟ್ ಹಾಪ್ ಪಿಚ್ ಕ್ರಿಕೆಟ್ ಟೂರ್ನಮೆಂಟಗೆ ಚಾಲನೆ

ಬೆಳಗಾವಿ: ಬೆಳಗಾವಿಯ ರಾಮದೇವ್ ಬೀದಿಯಲ್ಲಿ ಕಂಗ್ರಾಳಿ ಖುರ್ದ್ ಶ್ರೀ ಗಣೇಶ್ ಕಪ್ 2022 ಗ್ರ್ಯಾಂಡ್ ಡೇ ನೈಟ್ ಹಾಪ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನಾ ಸಮಾರಂಭ ಜರುಗಿತು. ಪ್ರಸ್ತುತ ಅತಿಥಿಗಳೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಲಾಯಿತು. ಮಹಾರಾಷ್ಟ್ರ ಏಕೀಕರಣ ಸಮಿತಿಯ ಯುವ ಮುಖಂಡ ಆರ್.ಎಂ. ಚೌಗುಲೆ, ಶ್ರೀರಾಮ ಸೇನೆ ಹಿಂದೂಸ್ಥಾನದ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್, ಮಾರ್ಕಂಡೆ ಸಕ್ಕರೆ ಕಾರ್ಖಾನೆ ನಿರ್ದೇಶಕ ಆರ್.ಐ.ಪಾಟೀಲ, ಅಂಬೇವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೇತನ್ ಪಾಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಪರಶುರಾಮ ಪಾಟೀಲ, ಧನಂಜಯ ತುಲಾಸ್ಕರ, ರಾಕೇಶ ಗೊಂಡವಾಡಕರ ಸೇರಿದಂತೆ ಗ್ರಾಮಸ್ಥರು ಹಾಗೂ ಕ್ರಿಕೆಟ್ ಪ್ರೇಮಿಗಳು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply