ಬೆಳಗಾವಿ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿದ್ದು, ಈಶಾನ್ಯ ಮಾರುತಗಳ ತಣ್ಣನೆಯ ಗಾಳಿ ದಕ್ಷಿಣ ಭಾರತದತ್ತ ಬೀಸುತ್ತಿವೆ. ಇದರಿಂದ ಉಷ್ಣಾಂಶ ಇಳಿಕೆಯಾಗಿ ಚಳಿ ಹೆಚ್ಚಾಗುತ್ತಿದೆ. ಚಳಿಗಾಲದ ರಾಜಧಾನಿ ಬೆಳಗಾವಿ ಈಗ ಕೊರೆಯುವ ಚಳಿಯಿಂದ ಗಡಗಡ ಎನ್ನುತ್ತಿದೆ. ಈ ಚಳಿಗೆ ಬೆಳಗಾವಿ ಜನತೆ ಈಗ ಕಂಗೆಟ್ಟಿದ್ದಾರೆ.ಬೆಳಗಾವಿಯ ಬಸವನಕೊಳ್ಳದಲ್ಲಿ ಅತ್ಯಂತ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಳಗಾವಿ ಜಿಲ್ಲೆ ಸೇರಿದಂತೆ ಇಡೀ ಉತ್ತರ ಕರ್ನಾಟಕದಲ್ಲಿ ಇದೀಗ ಚಳಿಯಿಂದ ಜನ ಮನೆಯಿಂದ ಹೊರ ಬರಲು ಉದಾಸೀನತೆ ಪಡುವಂತಾಗಿದೆ. ಫೆಬ್ರವರಿವರೆಗೂ ಚಳಿಯಿಂದ ಹೇಗೆ ಪಾರಾಗುವುದು ಎಂದು ಜನ ಯೋಚಿಸುವಂತಾಗಿದೆ. ಒಟ್ಟಾರೆ ಗಡಿನಾಡಿನಲ್ಲಿ ಚಳಿಯ ಕಾಟಕ್ಕೆ ಜನ ನಡುಗುತ್ತಿರೋದು ಸುಳ್ಳಲ್ಲ.
tv24plus.in > Blog > ಜಿಲ್ಲೆ > ಬೆಳಗಾವಿ > ಬೆಳಗಾವಿ ಜನರು ಕೊರೆಯುವ ಚಳಿಗೆ ಗಡ ಗಡ..!