ಬೆಳಗಾವಿ

ನೊಂದವರ ದಿನ ಕಾರ್ಯಕ್ರಮ ಆಚರಿಸಿದ ಆರಕ್ಷಕರು

 ಹುಕ್ಕೇರಿ: ಪೋಲಿಸ್ ಠಾಣೆಯಲ್ಲಿ ನೊಂದವರ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಸಾರ್ವಜನಿಕರ ಕುಂದು ಕೊರತೆ  ಪ್ರಕರಣಗಳ ವಿಚಾರಗಳು ಯಾವ ಹಂತದಲ್ಲಿ ಇವೆ,  ಪ್ರಕರಣಗಳಲ್ಲಿ ಮತ್ತೆ ಯಾವೂದಾದರೂ ದೂರುಗಳನ್ನ ಸಲ್ಲಿಸಬೇಕೆಂದು ಹುಕ್ಕೇರಿ ಪೋಲಿಸ್ ಇನ್ಸ್ಪೆಕ್ಟರ್ ಮಹಮ್ಮದ ರಪೀಕ ತಹಶಿಲ್ದಾರ ಇವರು ನೊಂದವರಿಗೆ ಪ್ರಕರಣಗಳ ಬಗ್ಗೆ ಸದ್ಯದ ಕೇಸಗಳು  ಯಾವ ಹಂತದಲ್ಲಿದೆ ಎಂದು ತಿಳಿಸಿದರು.ನಂತರ ಪ್ರಕರಣಗಳ ಬಗ್ಗೆ ತಿಳಿಹೇಳಿದರು ಉದಾಹರಣೆಗೆ ಬಡಿದಾಡಿಕೊಂಡ ಬಂದ ಪ್ರಕಕರಣ ಅಪಘಾತದಲ್ಲಿ ನಿಧನರಾದರವರ ಬಗ್ಗೆ ಇನ್ಸೂರೆನ್ಸ ಕ್ಲೇಮ್ ರಸ್ತೆ ಸುರಕ್ಷತಾ ಕ್ರಮಗಳನ್ನ ಪಾಲಿಸುವದು ಲೈಸನ್ಸ ಇನ್ಸೂರೆನ್ಸ ಆರ್ಸಿ ಬುಕ್  ಹೆಲ್ಮೇಟ ಹೀಗೆ ಹಲವು ರಸ್ತೆಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಮಹಿಳೆಯರು ಅನಾವಶ್ಯಕವಾಗಿ ಮೈಮೇಲೆ ಸಾಕಷ್ಟು ಬಂಗಾರ ಹಾಕಿಕೊಂಡು ತಿರುಗಾವಡುದನ್ನ ಕಡಿಮೆ ಮಾಡಬೇಕು ದುಷ್ಟರಿಗೆ ಅದನ್ನ ನೋಡಲಾಗದೆ ಏನೆ ಅನಾಹುತಗಳಾಗುತ್ತವೆಂದು ಮಾಹಿತಿ  ನೀಡಿದರು.ಈ ಸಂದರ್ಭದಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಮಹಮ್ಮದ್ ರಫಿಕ ತಹಶಿಲ್ದಾರರು ಹಾಗೂ ಸಿಬ್ಬಂದಿಗಳಾದ ಮೂಸಾ ಅತ್ತಾರ ಮಂಜುನಾಥ ಕಬ್ಬೂರೆ ಸಿ ಡಿ ಪಾಟೀಲ ಅಜೀತ ನಾಯಿಕ ರವಿ ಢಂಗ ಇನ್ನೂಳಿದ ಸಿಬ್ಬಂದಿ ಹಾಜರಿದ್ದರು.
TV24 News Desk
the authorTV24 News Desk

Leave a Reply