Uncategorized

ಕಳ್ಳ ದಾರಿ ಹಿಡಿದ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿದ ಚಿಕ್ಕಬಾಗೇವಾಡಿ ರೈತರು!!

ಬೆಳಗಾವಿ:

ಕಳ್ಳ ದಾರಿ ಹಿಡಿದು ಸಾಗುತ್ತಿರುವ ಟಿಪ್ಪರಗಳನ್ನು ತಡೆದು ಗ್ರಾಮಸ್ಥರ ಆಕ್ರೋಶ ಹೊರಹಾಕಿದ ಘಟನೆ
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ನಡೆದಿದೆ. ಕಳ್ಳದಾರಿಯ ಮೂಲಕ ಸಂಚಾರ ಮಾಡುತ್ತಿದ್ದ ಭಾರಿ ವಾಹನಗಳನ್ನು ತಡೆದು ರೈತರು ಆಕ್ರೋಶ ಹೊರಹಾಕಿದ್ದಾರೆ.ಟೋಲ್ ತಪ್ಪಿಸಲು ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ತಪ್ಪಿಸಲು ಕಳ್ಳ ದಾರಿ ಹಿಡಿದು ಟಿಪ್ಪರ್ ಚಾಲಕರು ಸಾಗುತ್ತಿದ್ದರು ಎನ್ನಲಾಗಿದೆ.ರೈತರಿಗೆ ಓಡಾಡಲಿಕ್ಕೆ ನಿರ್ಮಿಸಿದ ರಸ್ತೆಯಲ್ಲೆ ಟಿಪ್ಪರ ಸೇರಿ ಬೃಹತ್ ಗಾತ್ರದ ವಾಹನಗಳ ಓಡಾಟ ನಡೆಸುತ್ತಿದ್ದರಿಂದ ಜನರಿಗೆ ತೊಂದರೆಯಾಗುತ್ತಿರುವುದಕ್ಕೆ ರೈತರು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದರು.
ರೈತರಿಗಾಗಿಯೇ ನಿರ್ಮಿಸಿದ ರಸ್ತೆ ಮೇಲೆ ರೈತರು ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿದ್ದು 40 ಕ್ಕೂ ಹೆಚ್ಚು ಟಿಪ್ಪರಗಳನ್ನ ತಡೆದು ರೈತರ ಪ್ರತಿಭಟನೆ ನಡೆಸಿದ್ದಾರೆ.ಎಂಸ್ಯಾಂಡ್ ಹಾಗೂ ಜಲ್ಲಿಕಲ್ಲು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ತಡೆ ಹಿಡಿಯಲಾಗಿದೆ.
ಹತ್ತು ಚಕ್ರದ ಟಿಪ್ಪರ ವಾಹನಗಳಲ್ಲಿ ಚಾಲಕರು ಓವರ್ ಲೋಡ್ ತುಂಬಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಚಿಕ್ಕಬಾಗೇವಾಡಿ ಮತ್ತು ಎಂಕೆ ಹುಬ್ಬಳ್ಳಿ ಮಾರ್ಗ ಮಧ್ಯೆ ಟಿಪ್ಪರಗಳನ್ನ ತಡೆದು ರೈತರು ಆಕ್ರೋಶ ಹೊರಹಾಕಿದ್ದು
ಅಪಘಾತ ಸಂಭವಿಸಿ ಅನೇಕ ಸಾವಾಗಿದೆ ಇದಕ್ಕೆ ಯಾರು ಹೊಣೆ ಎಂದು ಅಧಿಕಾರಿಗಳನ್ನು ರೈತರು ಪ್ರಶ್ನೆ ಮಾಡಿದ್ದಾರೆ.ಬೃಹತ್ ಗಾತ್ರದ ವಾಹನಗಳು ಕಳ್ಳ ಮಾರ್ಗದಿಂದ ಹೋಗುತ್ತಿದ್ದರು ಕಣ್ಮುಚ್ಚಿ ಕುಳಿತ ಅಧಿಕಾರಿಗಳ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದರು.ಟಿಪ್ಪರ ಮಾಲೀಕರಿಗೆ ಇಂತಹ ರಸ್ತೆ ಮೇಲೆ ಓಡಾಡಲಿಕೆ ಸಹಕಾರ ನೀಡುತ್ತಿದ್ದಾರೆನ್ನುವ ಆರೋಪ ಕೇಳಿ ಬಂದಿದ್ದು ಅತಿಯಾಗಿ ಎಂಸ್ಯಾಂಡ್ ತುಂಬಿಕೊಂಡು ಹೊಗುತ್ತಿದ್ದರೂ ಅಧಿಕಾರಿಗಳ ಡೋಂಟ್ ಕೇರ್ ಎಂಬಂತೆ ವರ್ತನೆ ಮಾಡುತ್ತಿದ್ದಾರೆ.ಜಮೀನುಗಳಿಗೆ ಹೋಗುವಾಗ ಮೈಮೇಲೆ ವಾಹನಗಳನ್ನ ಹರಿಸಲು ಬರುತ್ತಾರೆಂದು ರೈತರು ಆರೋಪಿದ್ದು ತಕ್ಷಣ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಹೋದರೆ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.ಮೂರ್ನಾಲ್ಕು ಗಂಟೆಯಿಂದ ವಾಹನಗಳನ್ನ ತಡೆದರು ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ರೈತರು ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

TV24 News Desk
the authorTV24 News Desk

Leave a Reply