ಖಾನಾಪುರ :2023 ರ ವಿಧಾನಸಭಾ ಚುನಾವಣೆಗೆ ಕೆಪಿಸಿಸಿ ವತಿಯಿಂದ ಸ್ಪರ್ಧಿಸುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವಂತೆ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರರವರು ಆಹ್ವಾನಿಸಿದ ಹಿನ್ನೆಲೆಯಲ್ಲಿ ಗುರವಾರ ದಂದು ಕೆಪಿಸಿಸಿ ಕಛೇರಿಯಲ್ಲಿ ಇರ್ಫಾನ್ ತಾಳಿಕೋಟಿಯವರು ಖಾನಾಪುರ ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡ ಯಲ್ಲಪ್ಪ ಬಿ ಗೋಪಿತ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ತಾಳಿಕೋಟಿ ಇವರ ನೇತೃತ್ವದಲ್ಲಿ ಪಕ್ಷದ ಹೆಸರಿನಲ್ಲಿ೨ ಲಕ್ಷ ರೂಪಾಯಿ ಡಿಡಿ ಯೊಂದಿಗೆ ಅರ್ಜಿ ಸಲ್ಲಿಕೆ ಮಾಡಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅರ್ಬನ್ ಅಧ್ಯಕ್ಷ ಅಮರ ಗುರವ, ಯೂತ್ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಇಲಿಯಾಸ್ ಕರಜಗಿ, ಮಾಂತೇಶ್ ಸಂಗೊಳ್ಳಿ , ಜಹೀರ್ ಬೇಪಾರಿ , ಲಾಲ್ಸಿಂಗ್ ರಜಪೂತ್, ಕಮಲಾಕಾಂತ್ ಗುರವ್ , ಸುಭಾಷ್ ಗಾವಕರ, ದತ್ತು ಗಾವಕರ, ಓಂಕಾರ್ ರಜಪೂತ, ಹೈದರ ಶೇಖ್, ಪ್ರಕಾಶ್ ಗುರವ್, ಭುಜಂಗ ಕಾಮತ್, ಶಿವಾನಂದ ಬಾಗೇವಾಡಿ, ಆನಂದ್ ನೀಲಜಕರ್, ವಿಷ್ಣು ಕದಮ, ಪ್ರಭು ಕುತಕರ್, ಆನಂದ ಮಾದಾರ, ರಾಕಿ ಫರ್ನಾಂಡಿಸ್ , ಹಾಗೂ ಖಾನಾಪುರ ತಾಲೂಕಿನ ಇರ್ಫಾನ್ ತಾಳಿಕೋಟಿ ಅಭಿಮಾನಿ ಬಳಗ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.