ಬೆಳಗಾವಿ

 ಖಾನಾಪುರದಲ್ಲಿ ಸಂಕಲ್ಪ ಸಮಾವೇಶದ ಪೂರ್ವಭಾವಿ ಸಭೆ  ಜರುಗಿತು

ಖಾನಾಪುರ : ಬೆಂಗಳೂರಿನಲ್ಲಿ ನಡೆಯುತ್ತಿರುವ ಸಂಕಲ್ಪ ಸಮಾವೇಶದ ಪೂರ್ವಭಾವಿ ಸಭೆ ಖಾನಾಪುರದಲ್ಲಿಂದು  ಜರುಗಿತು.   ನವೇಂಬರ 25 ರಂದು ದಲಿತ ಸಂಘರ್ಷ ಸಮಿತಿ ಭೀಮ ವಾದ ಸಂಘಟನೆ ಆಯೋಜನೆಯಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತದೆ,  ಆದ ಕಾರಣ ಖಾನಾಪುರದಲ್ಲಿ  ಬೆಳಗಾವಿ ಜಿಲ್ಲಾ ಸಂಘಟನಾ ಸಂಚಾಲಕರಾದ ಸುಭಾಷ್ ಚಲವಾದಿ ಅವರ ನೇತೃತ್ವದಲ್ಲಿ ಹಾಗೂ ಖಾನಾಪುರ್ ತಾಲೂಕ ಅಧ್ಯಕ್ಷರಾದ ರಾಯಪ್ಪ ಚಲವಾದಿ ಅವರ ನೇತೃತ್ವದಲ್ಲಿ ಪೂರ್ವಭಾವಿಸಬೆ  ಖಾನಾಪುರ ತಾಲೂಕಿನಿಂದ ತೆರಳುತ್ತಿರುವ ಎಲ್ಲಾ ಮೂಲ ನಿವಾಸಿ ಸಂಘಟನಾ ಕಾರ್ಯಕರ್ತರಿಗೆ ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಲಾಯಿತು ಮತ್ತು ಸಭೆಯಲ್ಲಿ ರಾಜಶೇಖರ್ ಹಿಂಡಲಗಿ ಅವರು ಮಾತನಾಡಿ ತಾಲೂಕಿನಾದ್ಯಂತ ಬೆಂಗಳೂರಿಗೆ ತಿರುಳುತ್ತಿರುವ ಎಲ್ಲಾ ಸಮಾಜದ ಕಾರ್ಯಕರ್ತರಿಗೂ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ   ಖಾನಾಪುರ ತಾಲೂಕಿನ ಸಂಘಟನೆ ಕಾರ್ಯಕರ್ತರಾದ ಉಮೇಶ್ ಕೋಲಕಾರ್ ರಾಘವೇಂದ್ರ ಚಲವಾದಿ ದುರ್ಗಪ್ಪ ಚಲವಾದಿ ಶಿವಕುಮಾರ್ ದೊಡ್ಡಮನಿ ಉದಯ್ ಸಂತೋಷ್ ಹಾಗೂ  ಕಾರ್ಯಕರ್ತರು ಉಪಸ್ಥಿತರಿದ್ದರು

TV24 News Desk
the authorTV24 News Desk

Leave a Reply