ಖಾನಾಪುರ: ಮಹಾಲಕ್ಷ್ಮೀ ಗ್ರುಪ್ ಸಂಚಾಲಿತ ಲೈಲಾ ಶುಗರ್ಸ ಕಾರ್ಖಾನೆಯಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಸೊಸೈಟಿ ಹಾಗು ಶಾಲೆ ನಡೆಸಿದ ಸಂಸ್ಥೆಯು ಸಕ್ಕರೆ ಕಾರ್ಖಾನೆ ನಡೆಸುವಲ್ಲಿ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ ಆಮ್ ಆದ್ಮಿ ಪಕ್ಷದ ಮುಖಂಡ ದಶರಥ ಬನೋಶಿ ಆರೋಪಿಸಿದ್ದಾರೆ.
ಸುದ್ದಿವಾಹಿನಿ ಜೊತೆ ಮಾಡಿದ ಆಪ್ ಮುಖಂಡ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯ, ವಾಹನಗಳ ಅವಶ್ಯಕತೆ ಬಗ್ಗೆ ಅರಿವಿಲ್ಲದೆ ತುರಾತುರಿಯಲ್ಲಿ ಕಬ್ಬು ಸಾಗಿಸಲು ೭೦೦ ಕ್ಕೂ ಹೆಚ್ಚು ಖಾಸಗಿ ವಾಹನಗಳನ್ನು ಸೇರಿಸಿಕೊಂಡಿರುತ್ತಾರೆ. ಇದಕ್ಕೆ ಪ್ರಜ್ನ್ಯಾವಂತ ವ್ಯವಸ್ಥಾಪಕ ನಿರ್ದೇಶಕರ ಕೊರತೆ ಕಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಲೈಲಾ ಶುಗರ್ಸ್ ಕಾರ್ಖಾನೆಯಲ್ಲಿ ಕಳೆದ ದಿನಾಂಕ 14ರಿಂದ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕ್ಕರೆ ಪಡೆದುಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗಿತ್ತು.ಆದರೆ ಕಾರ್ಖಾನೆಯ ಆಡಳಿತ ಮಂಡಳಿ ಯಾವುದೇ ರೀತಿಯ ವ್ಯವಸ್ಥೆ ಮಾಡದೇ ರೈತರ ಜೊತೆ ಚಲ್ಲಾಟವಾಡುತ್ತಿದೆ. ಎಂದು ಬನೋಶಿ ಆರೋಪಿಸಿದರು.
ಚುನಾವಣೆ ಸಮೀಪ ಬರುತ್ತಿದ್ದಂತೆ ಬಿಜೆಪಿಯವರು ರೈತರ ಕಬ್ಬಿನ ಬಿಲ್ ಬಾಕಿ ಬಗ್ಗೆ ಮುತವರ್ಜಿವಹಿಸುತ್ತಾರೆ. ಅಷ್ಟೇ ರೈತರ ಬಗ್ಗೆ ಕಳಕಳಿ ಇರುವ ಬಿಜೆಪಿ ಸರ್ಕಾರ ಇದ್ದರೆ, ರಾಜ್ಯದ ಅನೇಕ ಕಡೆ ರೈತ ಬಾಂಧವರು ಬಿದಿಗಿಳಿದು ಕಳೆದ ಎರಡು ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಇನ್ನೂವರೆಗೂ ಮುಖ್ಯಮಂತ್ರಿ ಬೊಮ್ಮಾಯಿಯವರು ಕಬ್ಬಿನ ದರ ನಿಗದಿ ಪಡಿಸಿ ಘೋಷಣೆ ಮಾಡಿಲ್ಲ, ಸಕ್ಕರೆ ಕಾರ್ಖಾನೆ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ