ಬೆಳಗಾವಿಬೆಳಗಾವಿ ನಗರ

ಬೆಳಗಾವಿ ಬೀದಿ ನಾಯಿ‌ಗೆ ತೊಂದರೆ: ಸಿಎಂ, ಪಿ ಎಂ ವರೆಗೆ ಹೊಯ್ತು ದೂರು

ಬೆಳಗಾವಿ :ಬೆಳಗಾವಿ ನಗರದ ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ಜನರ ವಿರುದ್ಧ ಬೀದಿ ನಾಯಿಗೆ ಆಸೆರೆಯಾಗಿ ಊಟ, ಉಪಚಾರ ಮಾಡಿಕೊಂಡು ಬರುತ್ತಿರುವ ನಮಗೆ ಬೀದಿ ನಾಯಿಗಳಿಗೆ ಊಟಾ ಹಾಕಬೇಡಿ ಎಂದು ಶಹಾಪುರ ಸಿಪಿಐ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ‌.

ಬೀದಿ ನಾಯಿಗಳಿಗೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ವರೆಗೂ ಬೆಳಗಾವಿ ನಗರದ ಅನಿತಾ ದೊಡಮನಿ ದೂರು ಸಲ್ಲಿಸಿದ್ದಾರೆ‌.

ಮುಖ ಪ್ರಾಣಿಗಳಿಗೆ ಊಟ, ಉಪಚಾರ ಮಾಡಿಕೊಂಡು ಬರುತ್ತಿರುವ ನಮಗೆ ಈಗಾಗಲೇ ನೂರಾರರು ಬೀದಿ ನಾಯಿಗಳನ್ನು ಪಾಲನೆ ಮಾಡುತ್ತಿದ್ದೇವೆ. ಸ್ಥಳೀಯರಿಗೆ ನಾಯಿಗಳು ತೊಂದರೆ ಕೊಡುತ್ತಿವೆ. ಅವುಗಳಿಗೆ ಊಟ ಹಾಕಬೇಡಿ ಎಂದು ಶಹಾಪುರ ಸಿಪಿಐ ದಬ್ಬಾಳಿಕೆ ನಡೆಸಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗೂ ರಾಜ್ಯಪಾಲರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

 ಶಹಾಪುರ ಸಿಪಿಐ ಗೆ ಮೊದಲು ದೂರು ನೀಡಿದ್ದೇವು. ಬೀದಿ ನಾಯಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು. ಅವರು ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ ಹೊಂದಾಣಿಕೆ ಮಾಡಿಕೊಂಡು ಹೋಗಿ ಎಂದು ಹೇಳಿದ್ದಾರೆ. ನಮಗೆ ಲೈಸನ್ಸ್ ಇದೆ. ಜನರು ನಿತ್ಯ ಸಮಸ್ಯೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

TV24 News Desk
the authorTV24 News Desk

Leave a Reply