ಬೆಳಗಾವಿ: ಖಾನಾಪುರ ತಾಲೂಕಿನ ಪ್ಲಂಬರ್ ಯುವಕ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹನುಮಾನನಗರದಲ್ಲಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟ ಯುವಕ ಮಹೇಶ ಪರಶುರಾಮ ಪಾಟೀಲ (ವಯಸ್ಸು 21, ವಡೇಬೈಲ್) ಎಂದು ಗುರುತಿಸಲಾಗಿದೆ.
ಸಂಬಂಧಪಟ್ಟ ಗುತ್ತಿಗೆದಾರನ ವಿರುದ್ಧ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಳಗಾವಿಯ ಹನುಮಾನನಗರದಲ್ಲಿ ಮುಖ್ಯ ಗುತ್ತಿಗೆದಾರ ಅಭಿಜಿತ ಫಕೀರಯ್ಯ ಶಿವಯೋಗಿಮಠ ಅವರ ಅಡಿಯಲ್ಲಿ ಲಕ್ಷಣ ಮಂಜಳಕರ ಉಪ ಗುತ್ತಿಗೆದಾರರಾಗಿದ್ದಾರೆ. ಅನಗೋಳದಿಂದ ಮಹೇಶ ಪರಶುರಾಮ ಪಾಟೀಲ ಪ್ರತಿ ದಿನ ಬೆಳಗಾವಿ ಹನುಮಾನಗರದಲ್ಲಿ ಪ್ಲಂಬರ್ ಕೆಲಸಕ್ಕೆ ಹೋಗುತ್ತಿದ್ದರು. ಮಧ್ಯಾಹ್ನ ಹೊತ್ತು ಕೆಲಸ ಮಾಡುವಾಗ ಕೈಯಲ್ಲಿ ಡ್ರೈಂಡರ್ ಯಂತ್ರದಿಂದ ವಿದ್ಯುತ್ ತಂತಿ ತುಂಡಾಗಿ ಅವರಿಗೆ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಗುತ್ತಿಗೆದಾರ ಲಕ್ಷಣ ಮಂಜಳಕರ ವಿರುದ್ಧ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.