Uncategorized

ಕರ್ನಾಟಕದ ಪರ ಗೊತ್ತುವಳಿಗೆ ಕಿತ್ತೂರು ಕರ್ನಾಟಕ ಸೇನೆ ಬಿಗಿ ಪಟ್ಟು! ಪಾಲಿಕೆ ಮುಂದೆ ಕುಳಿತು ಪ್ರತಿಭಟನೆ!

ಬೆಳಗಾವಿ:

ಬೆಳಗಾವಿಯಲ್ಲಿ ಮೂರು‌ ತಿಂಗಳ ಬಳಿಕ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಕರೆಯಲಾಗಿದೆ.ಅತ್ತ ಪಾಲಿಕೆಯಲ್ಲಿ ಸಾಮಾನ್ಯ ಸಭೆಯಾಗುತ್ತಿದ್ದರೆ ಇತ್ತ ಹೊರಗೆ
ಪಾಲಿಕೆಗೆ ಕಿತ್ತೂರು ಕರ್ನಾಟಕ ಸೇನೆಯಿಂದ ಮುತ್ತಿಗೆ ಹಾಕಲಾಗಿದೆ.ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ್ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗಿದ್ದು ಕರ್ನಾಟಕದ ಪರ ನಿರ್ಣಯ ಕೈಗೊಳ್ಳದ ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಲಾಗುತ್ತಿದೆ.ಕಳೆದ ಮೂರು ತಿಂಗಳಿನಿಂದ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಗೊತ್ತುವಳಿ ಮಂಡನೆ ಮಾಡಲು ಹೋರಾಟ ನಡೆಸಿದ್ದರೂ ಸಹ ಗೊತ್ತುವಳಿ ಸ್ವೀಕಾರಕ್ಕೆ ಪಾಲಿಕೆ ಹಿಂದೇಟು ಹಾಕುತ್ತಿದೆ.ಎಲ್ಲಿಯವರೆಗೂ ಪಾಲಿಕೆಯಲ್ಲಿ ಗೊತ್ತುವಳಿ ಮಂಡನೆ ಮಾಡುವುದಿಲ್ಲವೊಇ ಅಲ್ಲಿಯವರೆಗೆ ಪಾಲಿಕೆ ಮೇಯರ್ ಸರ್ಕಾರಿ ವಾಹನ ಬಳಸಬಾರದು ಎಂದು ಆಗ್ರಹಿಸಿದ್ದಾರೆ.ಪಾಲಿಕೆಯ ವಿಳಂಬ ಧೋರಣೆ ಖಂಡಿಸಿ ಹೋರಾಟಗಾರು ಆಕ್ರೋಶ ಹೊರಹಾಕುತ್ತಿದ್ದು ಕಾಂಗ್ರೆಸ್ ಬಿಜೆಪಿ ಸೇರಿ ಎಲ್ಲಾ ಸದಸ್ಯರ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!