ಜಿಲ್ಲೆಬೆಳಗಾವಿ

ಜಿಲ್ಲೆಯಲ್ಲಿ ಈವರೆಗೆ ಮಳೆಗೆ ಎರಡು ಬಲಿ 221 ಮನೆಗಳಿಗೆ ಹಾನಿ:ಡಿಸಿ

ಬೆಳಗಾವಿ:

ಬೆಳಗಾವಿ ಜಿಲ್ಲೆಯಲ್ಲಿ ಬಿಟ್ಟೂ ಬಿಡದೆ ಸುರಿದ ಮಳೆಗೆ ಸಾಕಷ್ಟು ಅವಾಂತರಗಳಾಗಿವೆ. ಈ ಕುರಿತು ಸ್ವತಹ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು ನಿರಂತರ ಮಳೆಗೆ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಇಬ್ಬರ ಕುಟುಂಬಸ್ಥರಿಗೆ ಸರ್ಕಾರದಿಂದ ಈಗಾಗಲೇ ಪರಿಹಾರ ಒದಗಿಸಲಾಗಿದೆ.ಭಾರಿ ಮಳೆಗೆ ಈವರೆಗೂ 221 ಮನೆಗಳು ಹಾನಿಯಾಗಿವೆ. ಸಧ್ಯ ಕೃಷ್ಣಾ ನದಿಯಲ್ಲಿ 40 ಸಾವಿರ ಕ್ಯೂಸೇಕ್ ಒಳಹರಿವಿದೆ.ಅಲ್ಲದೆ ಮಹಾರಾಷ್ಟ್ರದಿಂದ ನೀರು ಬಿಡುವ ಕುರಿತು ನಿಗಾ ಇಡಲಾಗಿದೆ ಎಂದರು.ಇನ್ನು ಜಿಲ್ಲೆಯ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು ನದಿಗಳಿಗೆ ನೀರು ಹರಿ ಬಿಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

TV24 News Desk
the authorTV24 News Desk

Leave a Reply