ಬೆಳಗಾವಿ:ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್ ಬೆಳಗಾವಿಯಲ್ಲಿಂದು ಬಿಜೆಪಿ ನಾಯಕರ ಮಹತ್ವದ ಸಭೆ ನಡೆಯಿತು.
ಸಭೆಯ ಬಳಿಕ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ ಪಕ್ಷದ ಆದೇಶ ಹಿನ್ನೆಲೆಯಲ್ಲಿ ಸತೀಶ ಜಾರಕಿಹೊಳಿ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.ನಂತರ ಸತೀಶ ಜಾರಕಿಹೊಳಿ ಹೇಳಿಕೆ ವಾಪಸ್ ಪಡೆದಿದ್ದರು. ಈರಣ್ಣ ಕಡಾಡಿ ಮಾತನಾಡಿ ನಿನ್ನೆ ಘಟಪ್ರಭಾದಲ್ಲಿ ನನ್ನ ಕಾರ್ ಮೇಲೆ ಅಟ್ಯಾಕ್ ಘಟನೆ ಎಲ್ಲಾ ಪೂರ್ವ ನಿಯೋಜಿತ ಆಗಿದೆ,
ನಮ್ಮ ಎಲ್ಲಾ ನಾಯಕರಿಗೆ ಆಗಿರೋ ಘಟನೆ ವಿವರವಾಗಿ ತಿಳಿಸಿದ್ದೇನೆ. ಮುಗ್ಧ ಜನರನ್ನು ಬಳಸಿಕೊಂಡು ರಾಜಕೀಯ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.ಈ ಜನ ಯಾರು ಏನ್ ಅಂತ ನನಗೆ ಎಲ್ಲಾ ಗೊತ್ತಿದೆ. ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಪೊಲೀಸ್ ಇಲಾಖೆಗೆ ಮಾಹಿತಿ ಕೊಡುತ್ತೇನೆ. ಪೊಲೀಸರು ಪ್ರತಿಭಟನೆ ಬಗ್ಗೆ ನನಗೆ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದರು.
ನಂತರ ಮಾಜಿ ಡಿಸಿಎಂ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಅವರು ಮಾತನಾಡಿ ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವತ್ತು ಕಡಾಡಿಗೆ ಎಲ್ಲರೂ ಸೇರಿ ಸಾಂತ್ವನ ಹೇಳಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಅದು ಹಿಂದು ಧರ್ಮಕ್ಕೆ ಅವಹೇಳನ ಅನ್ನೋ ಭಾವನೆ ಹಿನ್ನೆಲೆಯಲ್ಲಿ ಧರಣಿ ಮಾಡಿದ್ದೇವೆ. ಕೆಲವೊಮ್ಮೆ ತಗಣಿಯನ್ನು ಮೈ ಮೇಲೆ ಬಿಟ್ಟುಕೊಳ್ಳುವ ಹಾಗೇ ಆಗುತ್ತದೆ.ಹೇಳಿಕೆ ವಾಪಸ್ ಪಡೆದಿದ್ದು ಇದಕ್ಕೆ ತೆರೆ ಬಿದ್ದಿದೆ ಎಂದು ನಾನು ಭಾವಿಸಿದ್ದೇನೆ.ಜಾರಕಿಹೊಳಿ ಬೆಂಬಲಿಗರ ಧರಣಿ ಬಗ್ಗೆ ನಾನೇನು ಹೇಳಲ್ಲ.ಛತ್ರಪತಿ ಸಂಭಾಜೀ ಮಹಾರಾಜರಿಗೆ ಅವಮಾನ ಆಗಿದೆ ಎಂದು ಡಿಸಿಎಂ ಫಡ್ನವಿಸ್ ಟ್ವಿಟ್ ಮಾಡಿದ್ದಾರೆ. ಸತೀಶ ಜಾರಕಿಹೊಳಿ ಹೇಳಿಕೆ ಬಗ್ಗೆ ಬಾಲಚಂದ್ರ, ರಮೇಶ ಖಂಡನೆ ಮಾಡಿಲ್ಲ. ಸಹೋದರ ಹೇಳಿಕೆಯಿಂದ ಮುಜುಗರ ಆಗಿರಬೇಕು.ಹೀಗಾಗಿ ಮೌನವಾಗಿ ಇದ್ದಾರೆ.ಪಕ್ಷದ ಪ್ರತಿಭಟನೆ ಬಗ್ಗೆ ಯಾರು ಟೀಕೆ ಮಾಡಿಲ್ಲ. ನಾನು ಪ್ರತಿಭಟನೆಗೆ ಭಾಗಿಯಾಗಿಲ್ಲ ಎಂದರು.ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕರು ಭಾಗಿಯಾಗಿದ್ಧರು.