ಬೆಳಗಾವಿ

ಅಕ್ರಮ ಮರಳು ಧಂಧೆ ತಡೆಯುವಲ್ಲಿ ಅಧಿಕಾರಿಗಳು ವಿಫಲ

ಖಾನಾಪುರ: ಅಕ್ರಮ  ಮರಳು ದಂಧೆಯು ಖಾನಾಪುರ ತಾಲೂಕಿನಾದ್ಯಂತ ನಡೆಯುತ್ತಿದ್ದು, ಕಾಡಂಚಿನ  ಗ್ರಾಮಗಳಾದ ಶೆಡಗಾಳಿ,ಕೊಡಚವಾಡ ಮತ್ತೂ  ತಾಲೂಕಾದ್ಯಂತ ಅಕ್ರಮ ಮರಳು ದಂಧೆ ಹಾಗೂ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ ನೈಸರ್ಗಿಕ ಸಂಪತ್ತು ನಿರಂತರ ಲೂಟಿ ಆಗುತ್ತಿದೆ ಆದರೆ ಕ್ರಮಕ್ಕೆ ಮುಂದಾಗಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆ, ತಾಲೂಕು ಆಡಳಿತ ಮೌನವಹಿಸಿದೆ.
ತಾಲೂಕಿನ ಹಾಲಾತ್ರಿ ನದಿ ಪಾತ್ರದಲ್ಲಿ ಮರಳು ಹೇರಳವಾಗಿ ಸಿಗುತ್ತಿದೆ.  ನದಿ ದಂಡೆಯ 10 ಕಿ.ಮೀ.ವರೆಗೂ ಮರಳು ಸಿಗುತ್ತಿರುವುದರಿಂದ ದಂಧೆಕೋರರು ನದಿಯ ಒಡಲನ್ನು ಬಗೆಯುತ್ತಿದ್ದಾರೆ.ಹಾಗೂ ಮರಳು ತುಂಬಿದ ಟ್ರ್ಯಾಕ್ಟರ್‌ ಹಾಗೂ ಟಿಪ್ಪರ್ ಸಂಚಾರದಿಂದ ಖಾನಾಪುರ, ಗೋವಾ ಸಂಪರ್ಕ ಕಲ್ಪಿಸಿಕೊಡುವ ಬಹುತೇಕ ರಸ್ತೆಗಳು ಹಾಳಾಗಿವೆ.
ರಾಜ್ಯ ಸರಕಾರ ಮರಳು ಅಕ್ರಮ ಸಾಗಣೆ ತಡೆಗಟ್ಟಲು ಹೊಸ ಕಾಯಿದೆ ಜಾರಿಗೆ ತಂದರೂ ಕಟ್ಟುನಿಟ್ಟಿನ ಅನುಷ್ಠಾನದಲ್ಲಿ ಅಧಿಕಾರಿಗಳ ಅಪ್ರಮಾಣಿಕತೆ ಮರಳು ಮಾಫಿಯಾಕ್ಕೆ ಕಡಿವಾಣ ಬಿದ್ದಿಲ್ಲ ಎಂಬ ಆರೋಪ ಹೆಚ್ಚಿವೆ. ಎಲ್ಲೆಂದರಲ್ಲಿ ಅಕ್ರಮ ಮರಳು ಸಂಗ್ರಹ, ಸಾಗಿಸುವುದು ಎಲ್ಲೆ ಮೀರಿದೆ. ಹೊಸ ಮರಳು ನೀತಿಯಿಂದ ಮರಳು ಅಕ್ರಮ ಸಾಗಣೆಗೆ ಕಡಿವಾಣ ಬೀಳುತ್ತದೆ ಎಂದು ಭಾವಿಸಿದ ಪರಿಸರ ಪ್ರೇಮಿಗಳಿಗೆ ಭ್ರಮನಿರಸವಾಗಿದೆ.
   ಜನರನ್ನು ಕೊನೆಯಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ, ಈ ಅಕ್ರಮವನ್ನು ತಡೆಯೋರು ಯಾರು ಎಂಬುದು. ಗಣಿ ಮತ್ತು ಭೂಗರ್ಭ ಶಾಸ್ತ್ರ ಇಲಾಖೆ ಅಕ್ರಮ ತಡೆಯಬೇಕಾದವರೆಲ್ಲರೂ ದಂಧೆಕೋರರ ಜತೆ ಕೈಜೋಡಿಸಿರಬಹುದು  ಎಂದು ಸಾರ್ವಜನಿಕರ ಸಂಶಯ ಇದೆ. ಇದಕ್ಕೆ ಅಕ್ರಮ ರಾಜಾರೋಷವಾಗಿ ನಡೆಯುತ್ತಿರುವುದೇ ಸಾಕ್ಷಿ. ಹೀಗೆ ರಕ್ಷಕರೇ ಭಕ್ಷಕರಾಗಿರುವುದರಿಂದ ಜನರ ಹಿತ ಕಾಪಾಡೋರು ಯಾರು ಎಂಬ ಚಿಂತೆ ಜನರದ್ದು.
  ಇದರ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ನಾವು ಮರಳು ತೆಗೆಯಲು ಯಾವುದೇ ರೀತಿಯಾಗಿ ಯಾರಿಗೂ ಪರವಾನಗಿ ನೀಡಿಲ್ಲ ಹಾಗೇನಾದರೂ ಅಕ್ರಮವಾಗಿ ಮಾಡುತ್ತಿದ್ದರೆ ಅಂತವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ  ಎಂದು  ತಹಶಿಲ್ದಾರಾದ ಖಾನಾಪುರ ಪ್ರವೀಣ ಜೈನ ಅವರು ತಿಳಿಸಿದ್ದಾರೆ.
TV24 News Desk
the authorTV24 News Desk

Leave a Reply