Uncategorizedಬೆಳಗಾವಿಬೆಳಗಾವಿ ನಗರ

ಬೆಳಗಾವಿ ಕೈ,ಕಮಲಕ್ಕೆ ಜೈ ಜೈ..!

ಲೋಕ ಸಮರ: ಯಾರಿಗೆ ಒಲಿಯುತ್ತೆ ಜನಾದೇಶ..!
ಬೆಳಗಾವಿ ಗಡಿನಾಡ ಭಾಗವಾದರು ಸಹಿತ ಈ ಜಿಲ್ಲೆ ಮಾರಾಠಿ ಹಾಗೂ ಕನ್ನಡಿಗರ ಜಿಲ್ಲೆಯಾಗಿ ಗುರುತಿಸಿಕೊಂಡ ಬೆಳಗಾವಿ ಲೋಕಸಭಾ ಕ್ಷೇತ್ರ. 2024ರ ಲೋಕಸಭಾ ಚುನಾವಣೆಯ ಮೇ 07ರಂದು ಜರುಗಿದೆ. ಇಲ್ಲಿ ಬರೋಬ್ಬರಿ 71.49 ರಷ್ಟು ಮತದಾನ ಆಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಉಂಟಾದ ಕ್ಷೇತ್ರದಲ್ಲಿ ಬೆಳಗಾವಿಯು ಒಂದಾಗಿದೆ. ಇಲ್ಲಿ ಕಾಂಗ್ರೆಸ್ ಜೈ ಜೈ ಅಥವಾ ಬಿಜೆಪಿ ಜೈ ಜೈ ಕಾದು ನೋಡಬೇಕಾಗಿದೆ. ಬೆಳಗಾವಿ ಲೋಕಸಭಾ ಜನತೆ ಯಾರಿಗೆ ಜೈ ಜೈ ಅಂತಾರೆ ಇದೆಲ್ಲ ಮತ ಪೆಟ್ಟಿಗಿಯಲ್ಲಿ ಭದ್ರವಾಗಿದೆ.

ಈ ಸಲ ಲೋಕ ಸಮರದಲ್ಲಿ ಕಾಂಗ್ರೆಸ್‌ ನಿಂದ ಸಚಿವೆ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಣಕ್ಕಿಳಿದರು. ಒಂದಷ್ಟು ಲಾಭಿ, ದೆಹಲಿ ಓಡಾಟ, ನಿರಂತರ ಸಭೆ ಬಳಿಕ ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಿಕೆಟ್ ಪಡೆದರು. ಕಾಂಗ್ರೆಸ್‌ನಲ್ಲಿ ಹೆಚ್ಚಾಗಿದೆ ಗೆಲುವಿನ ವಿಶ್ವಾಸ ಲಿಂಗಾಯತ ಸಮುದಾಯ, ಮತಗಳು ಹೆಚ್ಚಿರುವ ಬೆಳಗಾವಿಯಲ್ಲಿ ಕಾಂಗ್ರೆಸ್‌ ಈ ಭಾರಿ ಖಾತೆ ತೆರೆಯುವ ವಿಶ್ವಾಸದಲ್ಲಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಈ ಭಾಗದಲ್ಲಿ ವರ್ಚಸ್ಸು ಹೊಂದಿದ್ದಲ್ಲದೇ, ಹಾಲಿ ಸಚಿವೆ. ಪುತ್ರನನ್ನು ಇದೇ ಮೊದಲ ಭಾರಿಗೆ ಕಣಕ್ಕಿಳಿಸಿರುವ ಅವರು ಗೆಲ್ಲಿಸಿಕೊಂಡು ಬರಲೇಬೆಕೆಂಬ ಉದ್ದೇಶದಿಂದ ಅಬ್ಬರ ಪ್ರಚಾರ ಮಾಡಿದ್ದಾರೆ.

ಲೋಕ ಸಮರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಒಲವಿದೆ. ಕಾರ್ಯಕರ್ತರ ಹುಮ್ಮಸ್ಸಿನಿಂದ ಯಾವುದೇ ಒಳ ಬೇಗುದಿ ಇಲ್ಲದೇ ಬೆಂಬಲಿಸಿದ್ದಾರೆ.

ಪಕ್ಷಾಂತರ ಹಣೆಪಟ್ಟಿ ಹೊತ್ತ ಜಗದೀಶ್ ಶೆಟ್ಟರ್ ಕೊನೆಯ ಕಸರತ್ತಿನಲ್ಲಿ ಬೆಳಗಾವಿ ಟಿಕೆಟ್ ಪಡೆದರು. ಅವರು ಹುಬ್ಬಳ್ಳಿಯಲ್ಲಿ ಶಾಸಕರಾಗಿದ್ದಾಗ ಕೊರೊನಾ ಕಾಲದಲ್ಲಿ ಆಕ್ಸಿಜನ್ ಸೆಂಟರ್ ಅನ್ನು ಬೆಳಗಾವಿಗೆ ಬದಲಾಗಿ ತಮ್ಮ ಕ್ಷೇತ್ರದಲ್ಲಿ ಸ್ಥಾಪಿಸುವಲ್ಲಿ ಯಶಸ್ವಿಯಾದರೂ. ಅಧಿಕಾರದ ಆಸೆಗೆ ಪಕ್ಷಾಂತರ ಮಾಡಿದ್ದರು.

ಗೋ ಬ್ಯಾಕ್ ಶೆಟ್ಟರ : ಬೆಳಗಾವಿಯಲ್ಲೇ ಶೆಟ್ಟರ್‌ಗೆ ಟಿಕೆಟ್ ನೀಡದಂತೆ ವಿರೋಧ ಕೇಳಿ ಬಂದಿತ್ತು. ಸ್ಥಳೀಯ ನಾಯಕರಿಗೆ ನೀಡಬೇಕೆಂದು ಅಸಮಾಧಾನ ಸಹ ವ್ಯಕ್ತವಾಗಿತ್ತು. ಅಲ್ಲದೇ ಜಗದೀಶ್ ಶೆಟ್ಟರ್ ಶಾಸಕರಿಂದ ಮುಖ್ಯಮಂತ್ರಿವರೆಗೆ ಅಧಿಕಾರ, ಸ್ಥಾನಮಾನ ಅನುಭವಿಸಿದ್ದರು. ಬೆಳಗಾವಿ: ಶೆಟ್ಟರ್‌ಗೆ ವಿರೋಧ, ಕಾಂಗ್ರೆಸ್‌ಗೆ ಪ್ರತಿಷ್ಠೆ ಕಣ ಒಂದು ಕಡೆ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಸಿಎಂ ವರೆಗೂ ಸಂಪೂರ್ಣ ಬೆಂಬಲ ಪಡೆದ ಕಾಂಗ್ರೆಸ್ ಅಭ್ಯರ್ಥಿ ಮತ್ತೊಂದೆಡೆ ವ್ಯಾಪಕ ವಿರೋಧದ ನಡುವೆ ಟಿಕೆಟ್ ಪಡೆದ ಶೆಟ್ಟರ್ ಮಧ್ಯದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್ ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಗೆಲುವಿನ ಲೆಕ್ಕಾಚಾರ ಹಾಕಿದೆ.
ಕೈ ಅಭ್ಯರ್ಥಿಗೆ ಐದು ಶಾಸಕರ ಬೆಂಬಲ ಈಗಾಗಲೇ ಬೆಳಗಾವಿಯಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಮೂರರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಚಸ್ಸು ಹೆಚ್ಚಾಗಿದೆ. ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಆಸಿಫ್ ಸೇಠ್, ಮಹಾಂತೇಶ್ ಕೌಜಲಗಿ, ವಿಶ್ವಾಸ ವೈಧ್ಯ, ಅಶೋಕ್ ಮಹಾದೇವಪ್ಪ ಸೇರಿ ಎಲ್ಲ ಕಾಂಗ್ರೆಸ್ ಶಾಸಕರು ಬೆಂಬಲಿಸಿದ್ದಾರೆ. ಚುನಾವಣೆಯಲ್ಲಿ ಜೊತೆ ನಿಂತು ಕೆಲಸ ಮಾಡಿದ್ದಾರೆ. ಇದೆಲ್ಲ ಅಂಶಗಳು ಕೈ ಹಿಡಿಯಲಿವೆ ಎಂಬ ನಂಬಿಕೆ ಕಾಂಗ್ರೆಸ್ ನಾಯಕರದ್ದಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಗಾಳಿ ಬಿಸಿ ನಮಗೆ ನಮ್ಮ ಗೆಲವು ನಿಷ್ಚಿತ ಎನ್ನುತ್ತಾರೆ ಬಿಜೆಪಿ ನಾಯಕರು ಇದೆಲ್ಲದ್ದಕ್ಕೂ ಲೋಕಸಭಾ ಚುನಾವಣಾ ಫಲಿತಾಂಶವೇ ಉತ್ತರ ಸಿಗಲಿದೆ

TV24 News Desk
the authorTV24 News Desk

Leave a Reply