ಬೆಳಗಾವಿ

ಹುಕ್ಕೇರಿಯಲ್ಲಿ  ಅದ್ದೂರಿಯಾಗಿ ಕನಕದಾಸರ ಜಯಂತಿ ಆಚರಣೆ

ಹುಕ್ಕೇರಿ : ಪಟ್ಟಣದಲ್ಲಿ ಕನಕದಾಸ ಅವರ ಜಯಂತಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಇವರ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಣೆ ನಡೆಲಾಯಿತು.
ಶ್ರೀ ಮಹಾಸ್ವಾಮಿಗಳಾದ ಚಂದ್ರಶೇಖ ಶ್ರೀಗಳು ಶ್ರೀ ಕೃಷ್ಣ ಭಕ್ತರಾದ ಕನಕದಾಸರು ಅತಿ ಶ್ರೇಷ್ಠ ಶ್ರೀ ಕೃಷ್ಣ ಭಕ್ತರು ದೈವ ಭಕ್ತರಾಗಿದ್ದರು ಎಂದು ಪತ್ರಿಕಾ ಮಾಧ್ಯಮಗಳೊಂದಿಗೆ ಮಾತನಾಡಿದರು ಮತ್ತು ವಿಶೇಷವೇನೆಂದರೆ ಭಕ್ತ ಕನಕದಾಸರು ದೈವ ಭಕ್ತರಾದ ಶ್ರೀ ಕೃಷ್ಣ ಏಕೈಕ ಭಕ್ತ ಎಂದರೆ ಕನಕದಾಸರು.
ಯಾಕೆಂದರೆ ಅವರನ್ನು ಎಷ್ಟು ಹೋಗಳಿದರು ಅದು ಭಕ್ತಿ ಭಾವನೆಯೊಂದಿಗೆ ಅವರ ತತ್ವಗಳೊಂದಿಗೆ ನಡೆಯಬೇಕು ಅದೇ ರೀತಿ ನಡೆದರೆ ಮಾತ್ರ ಕನಕದಾಸರ ಜಯಂತಿ ಮಾಡಿದಕ್ಕೆ ಒಳ್ಳೆ ರೀತಿಯಲ್ಲಿ ಒಂದು ಸ್ವಾರ್ಥ್ ಸಿಗುವುದು ಎಂದು ಹೇಳಿದರು.
ಕನಕದಾಸರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಅಡವಿಸಿದ್ದೆಸ್ವರ ಮಠದಿಂದ ವಾದ್ಯ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮುಖಾಂತರ ಕೋರ್ಟ್ ಸರ್ಕಲ್ ವರೆಗೆ ಅತಿ ವಿಜೃಂಭಣೆಯಿಂದ ಮಾಡಲಾಯಿತು.
ಈ ಸಂದರ್ಭದಲ್ಲಿ ವಕೀಲರಾದ ಭೀಮಶಿ ಬಾಗಿ, ಭೀಮಪ್ಪಾ ನಾಗಪ್ಪಾ ಕರ್ಜಗಿ, ಗಜಾನಂದ ಕೊಳ್ಳಿ, ಶಂಕರರಾವ್ ಹೆಗ್ಗಡೆ, ಪುರಸಭೆ ಅಧ್ಯಕ್ಷರಾದ ಅಣ್ಣಪ್ಪಾ ಪಾಟೀಲ್, ಹಾಲು ಮತ ಸಮಾಜ ಮುಖಂಡರು ಹಾಗೂ ಅನೇಕ ಇಲಾಖೆ ಅಧಿಕಾರಿಗಳು ಮತ್ತು ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply