ವಿಜಯಪುರ: ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡನ ಮಧ್ಯೆ ಮಾತಿಕ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ವಿಜಯಪುರ ಜಿಲ್ಲೆ ಬಬಲೇಶ್ವರ ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಳವಾರ ಹಾಗೂ ಪರಿವಾರ ಸಮುದಾಯದವರಿಗೆ ಎಸ್ಟಿ ಸರ್ಟಿಫಿಕೆಟ್ ನೀಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಎಸ್ಟಿ ಪ್ರಮಾಣಪತ್ರ ನೀಡಬಾರದೆಂದು ವಿಜುಗೌಡ ಪಾಟೀಲ್ ಪಟ್ಟು ಹಿಡಿದ್ದರು.
ಇದಕ್ಕೆ ಸುನೀಲಗೌಡ ಪಾಟೀಲ್ ನಾನು ಪರಿಷತ್ ಸದಸ್ಯ, ನಿಯಮಾವಳಿ ಪ್ರಕಾರ ನಾನು ಎಸ್ಟಿ ಪ್ರಮಾಣ ಪತ್ರಗಳನ್ನು ತಳವಾರ ಜನರಿಗೆ ನಾನ್ಯಾಕೆ ನೀಡಬಾರದೆಂದು ಎಂದು ಪ್ರಶ್ನಿಸಿದರು. ಈ ವೇಳೆ ಇಬ್ಬರು ನಾಯಕರು ಏಕವನಚದಲ್ಲೇ ವಾಗ್ವಾದ ನಡೆಯಿತು. ಆಗ ಜಿಲ್ಲಾಧಿಕಾರಿಯಾದ ಡಾ. ವಿಜಯಮಹಾಂತೇಶ ದಾನಮ್ಮನವರ ಮಧ್ಯಸ್ಥಿಕೆ ವಹಿಸಿ ವಿಷಯವನ್ನು ತಿಳಿಗೊಳಿಸಿದರು.
ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್, ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ ಬಿ ಪಾಟೀಲ್ ಸಹೋದರರಾಗಿದ್ದು, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಬಸವನಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ್ ಸಹೋದರಾಗಿದ್ದಾರೆ. ವಿಜುಗೌಡ ಪಾಟೀಲ್ ಕರ್ನಾಟಕ ರಾಜ್ಯ ಸಾವಯವ ಮತ್ತು ಬೀಜ ಪ್ರಮಾಣನ ಸಂಸ್ಥೆಯ ಆಧ್ಯಕ್ಷರಾಗಿದ್ದಾರೆ.