ಬೆಳಗಾವಿ:
ಹೌದು ಘಟನೆಯ ತೀವ್ರತೆಯನ್ನು ನೆನೆಸಿಕೊಂಡರೇ ನಿಮಗೆ ಹೀಗೆ ಅನಿಸೇ ಅನಿಸುತ್ತೆ.ಗೋವುಗಳನ್ನು ರಕ್ಷಣೆ ಮಾಡಲು ಹೋಗಿದ್ದ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಗಿಡಕ್ಕೆ ಕಟ್ಟಿ ಹೊಡೆದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.
ಕಸಾಯಿ ಖಾನೆಗೆ ಗೋವು ತೆಗೆದುಕೊಂಡು ಹೊರಟಿದ್ದ ದರುಳರನ್ನು ಪ್ರಶ್ನೆ ಮಾಡಿದ ಗೋ ರಕ್ಷಕರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.ಶ್ರೀರಾಮಸೇನೆಯ ಏಳಕ್ಕೂ ಹೆಚ್ಚು ಯುವಕರ ಮೇಲೆ ಹಲ್ಲೆಯಾಗಿದ್ದು ಹಲ್ಲೆಯ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಆಕಳುಗಳನ್ನು ಎಲ್ಲಿ ತೆಗೆದುಕೊಂಡು ಹೊರಟಿದ್ದಿರಿ ಎಂದು ಪ್ರಶ್ನೆ ಮಾಡಿದ್ದ ಕಾರ್ಯಕರ್ತರನ್ನು ಗಿಡಕ್ಕೆ ಕಟ್ಟಿ ಹೊಡೆಯಲಾಗಿದೆ.ಪೊಲೀಸರಿಗೆ ದೂರು ಕೊಡಲು ಹೋದರೆ ರೇಪ್ ಮಾಡಿದ್ದಿರಿ ಎಂದು ಕೆಲವರು ಧಮಕಿ ಹಾಕಿದ್ದಾರೆ ಎಂದು ನಮ್ಮ ಮೇಲೆಯೇ ಆರೋಪ ಮಾಡಲಾತ್ತಿದೆ ಅಂತ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ವಿಠ್ಠಲ್ ಗಿಡ್ಡಿ ಆರೋಪಿಸಿದ್ದಾರೆ. ಹಿಂದೂ ಕಾರ್ಯಕರ್ತರನ್ನು ಹೊಡೆಯುತ್ತೆವೆ ಎಂದು ಧಮಕಿ ಹಾಕಿಸ್ದಾರೆ ಎಂದು ಗಡ್ಡಿ ಆರೋಪಿಸಿದ್ದು ಸಿದ್ದರಾಮಯ್ಯ ಸರ್ಕಾರ ಖಾನ್ ಸರ್ಕಾರ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಠ್ಠಲ್ ಗಡ್ಡಿ ಆಕ್ರೋಶ ಹೊರಹಾಕಿದ್ದಾರೆ.ಕಾನೂನು ರೀತಿಯಲ್ಲಿ ತಪ್ಪಿತಸ್ತರಿಗೆ ಸಜೆ ಆಗಬೇಕು.ಕಾನೂನು ಕ್ರಮ ಸರಿಯಾಗಿ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೆವೆ ಎಂದು ಜಿಲ್ಲಾಧ್ಯಕ್ಷ ವಿಠ್ಠಲ ಗಡ್ಡಿ ಎಚ್ಚರಿಕೆ ನೀಡಿದ್ದಾರೆ. ಇಷ್ಟಾದರೂ ಸಹ ಪ್ರಕರಣ ದಾಖಲಾಗದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದ್ದು ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



