





ಬೆಳಗಾವಿ:
ಗೋಕಾಕ ನಗರದ ಗ್ರಾಮ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆ ಇಂದು ಗೋಕಾಕದ ಲಕ್ಷ್ಮೀ ಸಭಾ ಭವನದಲ್ಲಿ ಜಿಲ್ಲಾಡಳಿತದಿಂದ ಸಭೆ ನಡೆಸಲಾಯ್ತು.ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಜಿಲ್ಲಾಧಿಕಾರಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಮಹಾಂತೇಶ ಕಡಾಡಿ,ಮುಖಂಡ ಸದಾಶಿವ ಗುದಗೋಳ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿ ಅಧಿಕಾರಿಗಳು ಹಾಗೂ ನಗರದ ಮುಖಂಡರು ಪಾಲ್ಗೊಂಡಿದ್ದರು. ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಕಳೆದ ಬಾರಿ ಆದ ಸಮಸ್ಯೆಗಳು ಈ ಬಾರಿ ಮರುಕಳಿಸದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ
ಈ ಹಿಂದೆ ಜಾತ್ರೆ ನಡೆದಾಗ ಮೂರರಿಂದ ನಾಲ್ಕು ಲಕ್ಷ ಜನ ಸೇರಿದ್ದರು ಸಮಸ್ಯೆ ಎನು ಅಂದ್ರೆ ಲಾ ಆರ್ಡರ್ ಮೆಂಟೇನ್ ಮಾಡೋದು ಬಂದವರಿಗೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಕೆಲ ಸಮಸ್ಯೆ ಆಗಲಿವೆ ಎಂಬ ಅಂದಾಜಿದೆ.ಪೊಲೀಸರು ಅದರ ಮೇಲೆ ನಿಗಾ ವಹಿಸಬೇಕು ಜಾತ್ರೆಯ ವಿಶೇಷತೆ ಭಂಡಾರ ಆಗಿರುವುದರಿಂದ ಅದನ್ನು ಪರೀಕ್ಷಿಸಲು ಅಧಿಕಾರಿಗಳಿಗೆ ಸೂಚನೆ ನೀಡ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು
ಭಂಡಾರ ಪರೀಕ್ಷಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೆವೆ ಎಂದರು ಇನ್ನು
ಜಾತ್ರೆಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಮಹಾಂತೇಶ ಕಡಾಡಿ ಪ್ರತಿಭಟನೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು
ಬ್ಯಾನರ್ ಕಟ್ಟಲು ಎಲ್ಲರಿಗೂ ಅವಕಾಶ ಕೊಡಬೇಕು ಎಂದು ಹೇಳಿದ್ದೆವೆ ಇದು ರಾಜಕೀಯದ ತುರುಸಲ್ಲ ಇದು ಜಾತ್ರೆ, ಎಲ್ಲ ಪಕ್ಷದವರು ಭಾಗವಹಿಸುತ್ತಾರೆ
ಬ್ಯಾನರ್ ಮುಕ್ತ ಮಾಡಲು ಆಗಲ್ಲ ಎಲ್ಲರೂ ಹಚ್ತಾರೆ ಎಲ್ಲರಿಗೂ ಅವಕಾಶ ಕೊಡಬೇಕು ಎಂದರು.
ನಮ್ಮ ಮನೆಯ ಮುಂದೆ ನಮ್ಮ ಅಂಗಡಿ ಮುಂದೆ ಬ್ಯಾನರ್ ಹಚ್ಚೋಕೆ ಯಾರ ಪರ್ಮಿಷನ್ ಬೇಕಿಲ್ಲ ಎಲ್ಲರಿಗೂ ಮುಕ್ತ ಅವಕಾಶ ಕೊಡುತ್ತೆವೆ ಎಂದು ಸತೀಶ ಹೇಳುವ ಮೂಲಕ ಗೋಕಾಕದ ಬ್ಯಾನರ್ ಬಡಿದಾಟಕ್ಕೆ ವಿರಾಮ ನೀಡಿದರು.ಇನ್ನು ಜಾತ್ರೆಯ ಸಮಯದಲ್ಲಿ ಜಲಪಾತದ ಬಳಿ ಪೊಲೀಸ್ ನಿಯೋಜನೆ ಮಾಡ್ತಿವಿ,ಜನರಿಗೆ ತೊಂದರೆ ಆಗಬಾರದು ಅಂತ ಈಗಾಗಲೇ ನಗರಾದ್ಯಂತ ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಒನ್ ವೇ ಮಾಡಲಾಗ್ತಿದೆ. ಜಾತ್ರೆಗಳಲ್ಲಿ ಹಾಗೂ ಉತ್ಸವಗಳಲ್ಲಿ ಕೆಲಸ ನಿರ್ವಹಿಸಿ ಅನುಭವ ಇರುವ ಅಧಿಕಾರಿಗಳನ್ನೆ ಇಲ್ಲಿ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ
ಹೊರಗಿನಿಂದ ಬಂದು ಹೋಗೋರು ಡೈಲಿ ಒಂದು ಲಕ್ಷ ಆಗಬಹುದು ಹೊರಗಿನಿಂದ ಬರೋರು ಭಕ್ತಿ ಭಾವದಿಂದ ಬಂದು ಹೋಗಬೇಕು ಎಂದು ಹೇಳಿದ ಅವರು ಮೊನ್ನೆಯಷ್ಟೆ ಬೆಂಗಳೂರು ಕಾಲ್ತುಳಿದ ಘಟನೆಯನ್ನು ನೆನಪಿಸಿಕೊಂಡು ಜಾಗೃತಿ ವಹಿಸಬೇಕು ಎಂದರು.ಇನ್ನು ಸಿಎಂ ಜೊತೆಗೆ ದೆಹಲಿ ಭೇಟಿ ವೇಳೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೇ ನೀಡಿದ ಸಚಿವರು ದೆಹಲಿಗೆ ಹೋಗಿದ್ವಿ ನಂತರ ವಾಪಸ್ ಬಂದ್ವಿ ಅಷ್ಟೆ ಅದರಲ್ಲಿ ಎನೂ ವಿಶೇಷ ಇಲ್ಲ ಎಂದರು ಇನ್ನು ರಾಜಣ್ಣ ಅವರ ಸಪ್ಟಂಬರ ನಂತರ ದೊಡ್ಡ ಕ್ರಾಂತಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜಣ್ಣ ಅವರೂ ಹೇಳಿದ್ದಾರೆ.ನಾವೂ ಹೇಳಿದ್ದೆವೆ ಅಲ್ಲಿಗೆ ಅದು ಮುಗಿಯಿತು ಎಂದು ಸತೀಶ ಹೇಳಿದರು, ಅಲ್ಲದೆ ವರಿಷ್ಠರಿದ್ದಾರೆ ಅವರು ನೋಡ್ತಾರೆ ಕ್ರಾಂತಿ ಮಾಡೋದು ಬಿಡೋದು ವರಿಷ್ಠರ ಕೈಯಲ್ಲಿದೆ ಎನು ಮಾಡಿದರೂ ಸಹ ವರಿಷ್ಠರು ಮಾಡಬೇಕು ನಾವು ಅದರಲ್ಲಿ ಒಂದು ಪಾರ್ಟ್ ಅಷ್ಟೆ ಎಂದು ಹೇಳಿದರು.ಇನ್ನು
ರಾಜಣ್ಣ ಅವರು ಮುಂದಿನ ಕೆಪಿಸಿಸಿ ಅಧ್ಯಕ್ಷ ಸತೀಶ ಹೇಳಿಕೆ ಆಗ್ತಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು
ಅದು ಅವರ ವಯಕ್ತಿಕ ವಿಚಾರ ಅವರು ಈಗಷ್ಟೆ ಅಲ್ಲ ಸುಮಾರು ಸಲ ಹೇಳಿದ್ದಾರೆ ವೇಟ್ ಮಾಡೋಣ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಈಗಿನ ಅಧ್ಯಕ್ಷರಿಗೆ ಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡೂ ಇದೆ ಹಾಗೆ ನಿಮಗೂ ಸಿಗುತ್ತಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅದರ ಪ್ರಶ್ನೆ ಈಗ ಉದ್ಭವಿಸಲ್ಲ ಆದ ಮೇಲೆ ವಿಚಾರ ಮಾಡೋಣ ಎಂದು ಸತೀಶ ಜಾರಕಿಹೊಳಿ ಹೇಳಿದರು.