ಜಿಲ್ಲೆಬೆಳಗಾವಿ

ಬಳುಕೋ ಕಾವೇರಿ ಕುಲುಕೋ ವೈಯ್ಯಾರಿ ಹೃದಯ ನಿಂದೇನೆ ದೋಚಿಕೋ!

ಬೆಳಗಾವಿ:

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಘಟಪ್ರಭಾ ನದಿ ಮೈದುಂಬಿ ಹರಿಯುತ್ತಿದೆ. ಅದರ ಪರಿಣಾಮವಾಗಿ ಗೋಕಾಕ ಜಲಪಾತಕ್ಕೆ ಈಗ ಜೀವ ಕಳೆ‌ ಬಂದಿದೆ. ಅಮೇರಿಕಾ ನಯಾಗರಾ ಫಾಲ್ಸ್ ನ್ನೆ ಹೋಲುವ ಭಾರತದ ನಯಾಗರಾ ಫಾಲ್ಸ್ ಇದಾಗಿದ್ದು ಬಂಡೆಗಲ್ಲುಗಳ ಮೇಲೆ ನೀರು ಹರಿದು ಬರುವ ದೃಶ್ಯಗಳು ಹಾಲ್ನೊರೆಯಂತೆ ಭಾಸವಾಗುತ್ತದೆ.‌52 ಅಡಿ ಮೇಲಿನಿಂದ ನೀರು ಕೆಳಗೆ ಧುಮುಕುವ ದೃಶ್ಯ ಎಂತವರನ್ನೂ ಸಹ ಮಂತ್ರ ಮುಗ್ಧಗೊಳಿಸುತ್ತದೆ. ಸಧ್ಯ ಗೋಕಾಕ ಗ್ರಾಮದೇವಿ ಜಾತ್ರೆಯೂ ಸಹ‌ ನಾಳೆಯಿಂದ ಪ್ರಾರಂಭವಾಗಲಿದ್ದು ಈ ಬಾರಿ ಗೋಕಾಕ ಜಲಪಾತಕ್ಕೆ ಪ್ರವಾಸಿಗರ ದಂಡೆ ಹರಿದು ಬರಿದಯವ ನಿರೀಕ್ಷೆ ಇದೆ. ಸಧ್ಯ ಜಿಲ್ಲಾ ಉಸ್ತುವಾರಿ ಸಚಿವರು ನಿನ್ನೆಯೇ ಜಾತ್ರಾ ಕಮೀಟಿಯ ಸಭೆ ಮಾಡಿದ್ದು ಗೋಕಾಕ ಜಲಪಾತಕ್ಕೆ ಹೆಚ್ಚಿನ ಭದ್ರೆತೆ ಒದಗಿಸಲು ನಿರ್ಧರಿಸಿದ್ದಾರೆ. ಅಕ್ಕ ಪಕ್ಕದ ಬೆಟ್ಟ ಗುಡ್ಡಗಳ ಸೊಬಗು ಹಾಗೂ ಕಲ್ಲು ಬಂಡೆಗಳ ಮೇಲಿಂದ ಧುಮುಕವ ನೀರು ನೋಡಲು ಗೋಕಾಕ ಜಲಪಾತಕ್ಕೆ ಸಧ್ಯ ಪ್ರವಾಸಿಗರು ದಂಡು ತಂಡೋಪ ತಂಡವಾಗಿ ಹರಿದು ಬರುತ್ತಿದ್ದು ಗೋಕಾಕ ಜಲಪಾತ ಈ ಬಾರಿ ಜಾತ್ರೆಯ ಹಾಟ್ ಫೇವರಿಟ್ ತಾಣವಾಗಿ ಬದಲಾಗಿದ. ಗೋಕಾಕ ಜಲಪಾತ ವೀಕ್ಷಣೆಗಾಗಿ ಕರ್ನಾಟಕ ಅಷ್ಟೇ ಅಲ್ಲದೆ ಪಕ್ಕದ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದಲೂ ಪ್ರವಾಸಿಗರು ಬರುತ್ತಿದ್ದು, ಗೋಕಾಕ ಜಲಪಾತದ ಸೌಂದರ್ಯ ಕಣ್ತುಂಬಿಕೊಂಡು ಪ್ರವಾಸಿಗರು ದಿಲ್ ಖುಷ್ ಆಗುತ್ತಿದ್ದಾರೆ.

TV24 News Desk
the authorTV24 News Desk

Leave a Reply