ಜಿಲ್ಲೆಬೆಳಗಾವಿ

ಜುಲೈ ಎರಡಕ್ಕೆ ಮಂಗೇಶ ಪವಾರ್ ಮೇಯರ್ ಆಗಿಯೇ ಮತ ಚಲಾಯಿಸ್ತಾರೆ: ಅಭಯ್ ಪಾಟೀಲ್

ಬೆಳಗಾವಿ:

ಬೆಳಗಾವಿ ಪಾಲಿಕೆ ಮೇಯರ್ ಹಾಗೂ ನಗರಸೇವಕರ ಸದಸ್ಯತ್ವ ರದ್ಧತಿ ರಾಜಕೀಯ ಪ್ರೇರಿತ ಎಂದು ಬೆಳಗಾವಿಯಲ್ಲಿ ಶಾಸಕ ಅಭಯ್ ಪಾಟೀಲ್ ಹೇಳಿದರು. ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು.
ಬೆಳಗಾವಿ ಪಾಲಿಕೆ ಮೇಯರ್, ಸದಸ್ಯರೊಬ್ಬರ ಸದಸ್ಯತ್ವ ರದ್ದು
ನಿರ್ಣಯ ರಾಜಕೀಯ ಪ್ರೇರಿತ,
ಇದು ನೀಚ ಮಟ್ಟದ ರಾಜಕೀಯ ಎಂದು ವಾಗ್ದಾಳಿ ನಡೆಸಿದರು.
ಸಾಮಾನ್ಯ ಕುಟುಂಬ ವ್ಯಕ್ತಿ ಮೇಯರ್ ಆಗಿದ್ದು ಕಾಂಗ್ರೇಸ್ ಗೆ ಸಹಿಸಲು ಆಗುತ್ತಿಲ್ಲ ಹಿಂದೆ ಓಪನ್ ಕೋರ್ಟ್ ನಲ್ಲಿ ಜಡ್ಜ್ ಅವರ ಕೈಯಿಂದ ಅಧಿಕಾರಿಗಳು ಉಗಿಸಿಕೊಂಡಿದ್ದಾರೆ ಐಎಎಸ್ ಅಧಿಕಾರಿಗಳಿಗೆ ಸರಿಯಾಗಿ ಟ್ರೇನಿಂಗ್ ಆಗಿಲ್ಲ ನಾನೇ ಟ್ರೇನಿಂಗ್ ಕೊಡ್ತಿನಿ ಅಂತ ಉಗಿದಿದ್ದಾರೆ. ಇಷ್ಟಾದರೂ ಅಧಿಕಾರಿಗಳಿಗೆ ಬುದ್ಧಿ ಬಂದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ನಗರಾಭಿವೃದ್ಧಿ ಕಾರ್ಯದರ್ಶಿ ಮಾಡಿರುವ ಈ ಆದೇಶವನ್ನು ಪ್ರಶ್ನಿಸಿ ನಾವು
ಹೈ ಕೋರ್ಟ್ ‌ಗೆ ಅಫೀಲ್ ಮಾಡುತ್ತೆವೆ.ಅಲ್ಲು ಆಗದಿದ್ದರೆ ನಾವು ಸುಪ್ರಿಂ ಕೋರ್ಟ್ ‌ಗೆ ಮೊರೆ ಹೋಗುತ್ತೆವೆ ಎಂದು ಅಭಯ್ ಪಾಟೀಲ್‌ ತಿಳಿಸಿದರು.
ಕಾರ್ಪೋರೇಟರ್ ಆದಮೇಲೆ ಅವರು ಮಳಿಗೆ ಪಡೆದರೆ ಅದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರೆ ಅದು ತಪ್ಪು,
ಆದರೆ ಕಾರ್ಪೋರೇಟರ್ ಆಗುವ ಮೊದಲು ಅವರು ಮಳಿಗೆ ಪಡೆದಿದ್ದಾರೆ ಎಂದರು.
ತಿನಿಸು ಕಟ್ಟೆ ಜಾಗ, ಅದು ತಿಪ್ಪೆ ಗುಂಡಿಯ ಜಾಗ ಇದ್ದ ರೀತಿಯಲ್ಲಿ ಇತ್ತು ಅದನ್ನು ಡೆವಲಪ್ಮೆಂಟ್ ಮಾಡಿದ್ದು ನಾನು ಎಂದರು. ಇನ್ನೂ ಮುರು ವರ್ಷ ಪಾಲಿಕೆಯಲ್ಲಿ ನಮ್ಮ ಅಧಿಕಾರ ಇದೆ ಎಲ್ಲದಕ್ಕೂ ನಾವೂ ಸಜ್ಜಾಗಿಯೇ ಇದ್ದೆವೆ ಎಲ್ಲವನ್ನೂ ಕಾನೂನು ರೀತಿಯಲ್ಲಿ ಎದುರಿಸುತ್ತೆವೆ ಎಂದರು.
ಜುಲೈ 2ರಂದು ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಇದೆ
ಈ ಚುನಾವಣೆಯಲ್ಲಿ ಮಂಗೇಶ್ ಪವಾರ್ ಮೇಯರ್ ಆಗಿಯೇ ಮತ ಚಲಾವಣೆ ಮಾಡ್ತಾರೆ ಎಂದು ಅಭಯ್ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ ಎಂದು ಅಭಯ ಪಾಟೀಲ್ ಹೇಳಿದರು.

TV24 News Desk
the authorTV24 News Desk

Leave a Reply