ಜಿಲ್ಲೆಬೆಳಗಾವಿ

ಹಿರಣ್ಯಕೇಶಿ ಅಬ್ಬರ ಮದಮಕ್ಕನಾಳ ಯರನಾಳ ಸೇತುವೆ ಬಂದ್

ಬೆಳಗಾವಿ:

ಮಹಾರಾಷ್ಟ್ರದ ಮಳೆಯಬ್ಬರದಿಂದ ಕರ್ನಾಟಕದತ್ತ ಹರಿದು ಬರುತ್ತಿರುವ ನದಿಗಳಿಗೆ ಜೀವ ಕಳೆ ಬಂದಿದ್ದು ನದಿಗಳು ತಮ್ಮ ಅಪಾಯದ ಮಟ್ಟವನ್ನ ಮೀರಿ ಹರಿಯುತ್ತಿವೆ.ಹುಕ್ಕೇರಿ ತಾಲೂಕಿನ‌ ಜೀವನದಿಯಾಗಿರುವ ಹಿರಣ್ಯಕೇಶಿ ನದಿ ಉಕ್ಕಿ ಹರಿಯುತ್ತಿದ್ದು ನದಿ ಪಾತ್ರದಲ್ಲಿ ರೈತರು ಬೆಳೆದ ಕಬ್ಬಿನ ಬೆಳೆ ಹಾಗೂ ಗೋವಿನ ಜೋಳ ನೀರಲ್ಲಿ ತೇಲುತ್ತಿದೆ.ಇನ್ನು ಯರನಾಳ ಗ್ರಾಮದಿಂದ ಮದಮಕ್ಕನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಕಮ್ ಬ್ಯಾರೇಜ್ ಸಂಪೂರ್ಣ ಮುಳುಗಡೆಯಾಗಿದೆ.ಸಧ್ಯ ಹೊಸೂರು ಗ್ರಾಮ ಪಂಚಾಯ್ತಿ ಸಿಬ್ಬಂಧಿ ಹಾಗೂ ಯಮಕನಮರಡಿ ಪೊಲೀಸರ ನೇತೃತ್ವದಲ್ಲಿ ಸೇತುವೆಗೆ ಭದ್ರತೆ ನೀಡಲಾಗಿದ್ದು ಬ್ಯಾರಿಕೇಡ್ ಹಾಕಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಸೇತುವೆ ಬಂದ್ ಆಗಿ ಬಂದ್ ಆಗಿದ್ದರಿಂದ ಸಧ್ಯ ಜನ ಪಾರ್ಯಾಯ ಮಾರ್ಗವಾಗಿ ಹುಕ್ಕೇರಿ ಪಟ್ಟಣಕ್ಕೆ ಹೋಗುತ್ತಿದ್ದಾರೆ.‌ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರೆದರೆ ಬೆಳಗಾವಿಯ ನದಿ ಪಾತ್ರದ ಜನ ಜೀವನ ಸಂಕಷ್ಟಕ್ಕೆ ಸಿಲುಕುತ್ತೆದೆ.

TV24 News Desk
the authorTV24 News Desk

Leave a Reply