ಬೆಳಗಾವಿ

ನಿರಂತರ ಮಳೆಗೆ ಮೈದುಂಬಿದ ನೀರ್ಝರಿಗಳೆದುರು ಯುವಕರ ಹುಚ್ಚಾಟ!

ಬೆಳಗಾವಿ: ಕಳೆದ ಎರಡ್ಮೂರು ದಿನಗಳಿಂದ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದರ ಪರಿಣಾಮವಾಗಿ ಖಾನಾಪುರದ ಕಾನನದಲ್ಲಿರುವ ನೀರ್ಝರಿಗಳು ಮೈದುಂಬಿಕೊಂಡಿವೆ. ನೀರ್ಝರಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆಯಾದರೂ ಸಹ ಪ್ರವಾಸಿರು ಎಲ್ಲೆ ಮೀರಲು ಪ್ರಾರಂಭಿಸಿದ್ದಾರೆ. ಬೆಳಗಾವಿ ಜಿಲ್ಲೆಯಾದ್ಯಂತ ಉತ್ತಮ ಮಳೆಯ ಹಿನ್ನೆಲೆ ಬಹುತೇಕ ಜಲಪಾತಗಳಿಗೆ ಜೀವಕಳೆ ಬಂದಿದೆ. ಖಾನಾಪುರದ ಚಿಕಲೆ ಜಲಪಾತದಲ್ಲಿ ಯುವಕರು ಹುಚ್ಚಾಟ ಮೆರೆದಿರುವ ವಿಡಿಯೋ ಸಧ್ಯ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುಮಾರು 108 ಅಡಿ ಮೇಲಿನಿಂದ ಧುಮ್ಮಿಕ್ಕುವ ಜಲಪಾತದ ಕೆಳಗೆ ಯುವಕರು ಹೋಗಿ ನೆತ್ತಿಯ ಮೇಲೆ ನೀರುವ ಬೀಳುವ ಜಾಗದಲ್ಲಿ ಡಾನ್ಸ್ ಮಾಡಿದ್ದಾರೆ. ಜಲಪಾತ ನೋಡಲು ಹೋಗುವ ಪ್ರವಾಸಿಗರು ಈ ಹುಚ್ಚಾಟ ನಡೆಸುವ ವೇಳೆ ಚೂರು ಆಯ ತಪ್ಪಿದರೂ ಸಹ ಹೆಚ್ಚು ಅನಾಹುತಗಳು ಆಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಈ ಹುಚ್ಚಾಟ ನಡೆಸುವವರ ಮೇಲೆ ನಿಗಾ ಇಡಬೇಕಾಗಿದೆ.

TV24 News Desk
the authorTV24 News Desk

Leave a Reply