ಬೆಳಗಾವಿ:
ಮೂಡಲಗಿಯಲ್ಲಿ ಅಡವಿಸಿದ್ದರಾಮ ಸ್ವಾಮೀಜಿಯ ಭಕ್ತರು ಹೈಡ್ರಾಮಾ ನಡೆಸಿದ್ದಾರೆ. ಸ್ವಾಮೀಜಿಯ ವಿರುದ್ದ ಶಿವಾಪೂರ ಗ್ರಾಮದ ದುರ್ಗಪ್ಪ ಎಂಬಾತ ಸ್ವಾಮೀಜಿ ಹಾಗೂ ಅವರ ಭಕ್ತರ ವಿರುದ್ಧ ಬಾಯಿ ಹರಿಬಿಟ್ಟಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೆ ಸ್ವಾಮೀಜಿಯ ಭಕ್ತರು ಠಾಣೆಯ ಮುಂದೆ ಜಾಮಾಯಿಸಿ ದುರ್ಗಪ್ಪನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ರಾತೋರಾತ್ರಿ ನೂರಾರು ಭಕ್ತರು ಮೂಡಲಗಿ ಪೊಲೀಸ್ ಠಾಣೆಯ ಮುಂದೆ ಜಾಮಾವಣೆಗೊಂಡಿದ್ದರಿಂದ ಪೊಲೀಸರೂ ಸಹ ವಿಚಲಿತರಾಗುಂತ ಪರಿಸ್ಥಿತಿ ನಿರ್ಮಾಣವಾಗಿತ್ತು.ವೈರಲ್ ಆಗಿರುವ ವಿಡಿಯೋದಲ್ಲಿ ಸ್ವಾಮೀಜಿ ಈ ಮಟಕ್ಕೆ ಹೇಗೆ ಬರ್ತಾನೆ ಬರಲಿ ಅವನನ್ನು ಮಠಕ್ಕೆ ಕರೆದುಕೊಂಡು ಬರಲು ಹೋದವರಿಗೆ ತಲೆಗೆ ಐನೂರು ರೂಪಾಯಿ ಸಂಬಳ ನೀಡಲಾಗಿದೆ ಎಂದು ದುರ್ಗಪ್ಪ ಹೇಳಿದ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ಈಗ ಸ್ವಾಮೀಜಿಯ ಭಕ್ತಗಣದಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದು ದುರ್ಗಪ್ಪನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ. ತಡರಾತ್ರಿ ಮೂಡಲಗಿ ಪೊಲೀಸರು ಠಾಣೆಯ ಮುಂದೆ ಬಂದಿದ್ದ ನೂರಾರು ಜನರನ್ನು ಮನವೊಲಿಸಿ ಕಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಮೊನ್ನೆಯಷ್ಟೆ ಮೂಡಲಗಿ ತಾಲೂಕಿನ ಅಡವಿಸಿದ್ದೇಶ್ವರ ಮಠದಲ್ಲಿ ಮಠದ ಸ್ವಾಮೀಜಿ ಅಡವಿಸಿದ್ದರಾಮ ಸ್ವಾಮೀಜಿಯವರು ತಡರಾತ್ರಿ ಮಠದಲ್ಲಿ ಓರ್ವ ಮಹಿಳೆ ಮತ್ತು ಆಕೆಯ ಮಗಳನ್ನು ಇರಿಸಿಕೊಂಡಿದ್ದಕ್ಕೆ ಗ್ರಾಮದ ಕೆಲ ಯುವಕರು ಹೋಗಿ ದಾಂಧಲೆ ಮಾಡಿದ ವಿಡಿಯೋಗಳು ವೈರಲ್ ಆಗಿದ್ದವು. ಅಲ್ಲದೆ ಮಾಧ್ಯಮಗಳಲ್ಲೂ ಸಹ ಸ್ವಾಮೀಜಿ ಪರ ಮತ್ತು ವಿರೋಧವಾಗಿ ಸುದ್ದಿಗಳು ಪ್ರಕಟವಾಗಿದ್ದವು. ಇದಾದ ಬಳಿಕ ಸ್ವಾಮೀಜಿ ಪತ್ರಿಕಾಗೋಷ್ಠಿ ನಡೆಸಿ ಇದೆಲ್ಲವೂ ತಮಗೆ ಆಗದವರ ಕುತಂತ್ರ ಇಲ್ಲ ಸಲ್ಲದ ಆರೋಪ ನನ್ನ ಮೇಲೆ ಮಾಡಲಾಗುತ್ತಿದೆ ಕೋರ್ಟ್ ಕಚೇರಿ ಯಾವುದೂ ಬೇಡ ಗುಡಿಯಲ್ಲಿ ದೇವರೇ ನಿರ್ಣಯ ಮಾಡಬೇಕು ಎಂದಿದ್ದರು. ಸಧ್ಯ ಗ್ರಾಮದಲ್ಲಿ ಸ್ವಾಮೀಜಿಯವರ ವಿರುದ್ಧವಾಗಿ ಒಂದು ಗುಂಪಿದ್ದರೇ ಅವರ ಪರವಾಗಿ ಮತ್ತೊಂದು ಗುಂಪಿದೆ. ಇದೆಲ್ಲವೂ ಎಲ್ಲಿಗೆ ಹೋಗಿ ತಲುಪುತ್ತೆ ಕಾದು ನೋಡಬೇಕು.


