
ಬೆಳಗಾವಿ:
ಶಾಸಕ ಬಸನಗೌಡ ಯತ್ನಾಳ ಪಾಟೀಲ್ ಉಚ್ಛಾಟನೆಯ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಕೂಡಲಸಂಗಮ ಸ್ವಾಮೀಜಿ ಪ್ರತಿಕ್ರಿಯೇ ನೀಡಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಹರಿಕಾರ ಹಿಂದುತ್ವದ ನಾಯಕ ಯತ್ನಾಳ ಅವರನ್ನು ಕೆಲವರು ಕುತಂತ್ರ ಮಾಡಿ ಪಕ್ಷದಿಂದ ಉಚ್ಛಾಟನೆ ಮಾಡಿದ್ದು ಖಂಡನೀಯ ಎಂದು ಶ್ರೀಗಳು ಹೇಳಿದ್ದಾರೆ. ಲಿಂಗಾಯತ ನಾಯಕತ್ವ ಬೆಳೆಯುತ್ತಿದೆ. ಹಿಂದುತ್ವದ ಕೂಗು ಅಡಗಿಸಲು ಹೀಗೆ ಮಾಡಲಾಗಿದೆ ಎಂದ ಅವರು ಯತ್ನಾಳ ಅವರನ್ನು ರಾಜ್ಯದ ಜನ ಸಿಎಂ ಆಗಿ ನೋಡಬೇಕು ಎಂದು ಇಂಗಿತದಲ್ಲಿದ್ದರು. ನಾಯತ್ವ ಕುಗ್ಗಿದಲು ಬಿಜೆಪಿ ಒಳಗೆ ಇರುವ ಕೆಲವರು ಷಢ್ಯಂತ್ರ ಮಾಡಿದ್ದಾರೆ. ಬಿಜೆಪಿಗೆ ದೊಡ್ಡ ವೋಟ್ ಬ್ಯಾಂಕ್ ದಾಖಲಿಸಿದ ಪಂಚಮಸಾಲಿ ಸಮುದಾಯ. ಮೀಸಲಾತಿ ಕೊಡದಿದ್ದಕ್ಕೆ ಕಾಂಗ್ರೇಸ್ ಗೆ ಸಪೋರ್ಟ್ ಮಾಡಿದ್ವಿ. ಆದ್ರೆ ಕಾಂಗ್ರೇಸ್ ನವರು ನಮ್ಮ ಸಮುದಾಯ ಮೇಲೆ ಲಾಠಿ ಏಟು ಬೂಟಿನೇಟು ನೀಡಿದರು.ಇದನ್ನ ನೋಡಿದ ಸಮುದಾಯ ಮತ್ತೆ ಬಿಜೆಪಿಯತ್ತ ವಾಲಿತ್ತು. ನಮ್ಮ ನಾಯಕನ ಧ್ವನಿ ಅಡಗಿಸಿದ ಬಿಜೆಪಿಗೆ ಸಪೋರ್ಟ್ ಮಾಡಬೇಕಾ ಅನ್ನೋದರ ಕುರಿತು ಚರ್ಚೆ ಮಾಡ್ತಿವಿ. ಲಿಂಗಾಯತ ನಾಯಕರ ತುಳಿಯುವ ನಾಯಕರ ವಿರುದ್ಧ ನಮ್ಮ ಹೋರಾಟ ಮುಂದಯವರೆಯುತ್ತದೆ ಎಂದ ಅವರು ಅಮೀತ್ ಷಾ, ಮೋದಿಯವರ ವಿರುದ್ಧ ನಮ್ಮ ಹೋರಾಟ ಅಲ್ಲ. ನಮ್ಮ ಸಮಾಜದ ವೋಟ್ ಪಡೆದ ಶಾಸಕರು ಮೋದಿಯವರ ಮನವೊಲಿಸಿ ಕೂಡಲೇ ಆದೇಶ ಹಿಂಪಡೆಯಬೇಕು. ಇಲ್ಲವಾದ್ರೆ ನಿಮ್ಮ ಕಾಲ ಮೇಲೆ ನೀವು ಕಲ್ಲು ಹಾಕಿಕೊಂಡ ಹಾಗೆ ಆಗುತ್ತೆ. ಮುಂದಿನ ನಡೆ ಬಗ್ಗೆ ಇಂದು ಮಧ್ಯಾಹ್ನ ಮೂರು ಗಂಟೆಯ ನಂತರ ಸಭೆ ಮಾಡ್ತಿವಿ.ಈಗಷ್ಟೆ ಯತ್ನಾಳ ಅವರ ಜೊತೆ ನಾನು ಮಾತನಾಡಿದ್ದೆನೆ.ಇದು ಮೊದಲ ಸಲಾ ಅಲ್ಲ ಈ ಹಿಂದೆಯೂ ಹೀಗೆ ಆಗಿದೆ. ಅವರು ಗಟ್ಟಿಯಾಗಿದ್ದಾರೆ. ಸ್ವಲ್ಪ ಮನಸಿಗೆ ನೋವಾಗಿದೆ. ಮೀಸಲಾತಿ ವಿರೋಧ ಮಾಡಿದವರೇ ಇಂದು ಉಚ್ಛಾಟನೆಗೆ ಕಾರಣವಾಗಿದ್ದಾರೆ ಎಂದ ಸ್ವಾಮೀಜಿ ಪರೋಕ್ಷವಾಗಿ ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಹಾಯ್ದರು. ಕುಂತಂತ್ರಕ್ಕೆ ಒಳಪಟ್ಟು ಶಿಸ್ತು ಪಾಲನಾ ಸಮೀತಿ ಈ ರೀತಿ ಕೆಲಸ ಮಾಡಿದೆ ಅಮೀತ್ ಷಾ, ಮೋದಿಯವರ ಗಮನಕ್ಕೆ ಇದು ಬಂದಿಲ್ಲ. ಉತ್ತರ ಕರ್ನಾಟಕದ ಲಿಂಗಾಯತ ನಾಯಕರನ್ನು ತುಳಿಯಬೇಕು ಕರ್ನಾಟಕದ ಲಿಂಗಾಯತ ನಾಯಕರು ಒಂದೇ ಕುಟುಂಬದವರು ಅಂತ ಬಿಂಬಿಸಿಕೊಂಡಿದ್ದಾರೆ. ಇದರಿಂದ ಪಕ್ಷಕ್ಕೆ ದೊಡ್ಡ ಮಟ್ಟದ ಡ್ಯಾಮೇಜ್ ಆಗ್ತಿದೆ. ಯಡಿಯೂರಪ್ಪ ಅವರಿಗೆ ಒಂದು ಸಂದರ್ಭ ಇತ್ತು ಬೆಂಬಲಿಸಿಕೊಂಡಿದ್ದಾರೆ. ಯತ್ನಾಳರಿಗೆ ನಾಯಕತ್ವ ಕೊಡಬೇಕು ಅಂತ ಜನರು ಚಿಂತನೆ ಮಾಡಿದ್ದರು. ಕುಟುಂಬ ನಂಬಿ ಪಕ್ಷ ಕಟ್ಟುತ್ತೀರಾ ಅಥವಾ ಜನ ಸಮಾನ್ಯರ ನಂಬಿ ಪಕ್ಷ ಕಟ್ಟುತ್ತಿದ್ದಾರಾ ಎಂದು ಪ್ರಶ್ನೆ. ಬೀದರನಿಂದ ಚಾಮರಾಜನಗರದವರೆಗೆ ಹೋರಾಟಕ್ಕೆ ಕರೆ ಕೊಡಬೇಕು ಅಂತಾ ಇದೆ. ಗೌಡ್ರು ಪಂಚಮಸಾಲಿ ಸಮಾಜಕ್ಕೆ ಸೀಮಿತ ಅಲ್ಲಾ ಬೇರೆ ಜಾತಿಯವರ ಬೆಂಬಲವೂ ಸಹ ಅವರಿಗಿದೆ ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.