Uncategorized

ಯತ್ನಾಳ ಉಚ್ಛಾಟನೆ ರಮೇಶ ಜಾರಕಿಹೊಳಿ ಎನಂದ್ರು?

ಬೆಳಗಾವಿ:

ಬಿಜೆಪಿಯಿಂದ ಬಸನಗೌಡ ಯತ್ನಾಳ ಉಚ್ಛಾಟನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ. ಯತ್ನಾಳ ಉಚ್ಛಾಟನೆಯ ಯತ್ನ ಒಂದು ತಿಂಗಳಿಂದ ನಡೆದಿತ್ತು. ನಮಗೆ ಮೊದಲೇ ಸುದ್ದಿ ಇತ್ತು. ಹೈಕಮಾಂಡ್ ಕಡೆಯಿಂದ ವಾಸನೆ ಬಡೆದಿತ್ತು ಎಂದಿದ್ದಾರೆ. ಯತ್ನಾಳ ಅವರು ಪಕ್ಷದ ದೊಡ್ಡ ನಾಯಕರು. ಇವತ್ತು ನಮ್ಮ ನಾಯಕರು ಪಕ್ಷ ನಿರ್ಧಾರ ಯಾಕೆ ತೆಗೆದುಕೊಂಡಿದೆ ಗೊತ್ತಿಲ್ಲ.ಪಕ್ಷದ ನಿರ್ಣಯ ಪ್ರಶ್ನಿಸುವ ದೊಡ್ಡ ವ್ಯಕ್ತಿ ನಾನಲ್ಲ. ನಾಳೆ ಎಲ್ಲ ನಾಯಕರು ಬೆಂಗಳೂರಿನಲ್ಲಿ ಚರ್ಚೆ ಮಾಡ್ತಿವಿ. ಯತ್ನಾಳ ಕಡೆಯಿಂದ ಹೈಕಮಾಂಡ್ ಗೆ ಪತ್ರ ಬರೆಸುತ್ತೆವೆ. ಪುನಃ ಮರುಪರಿಶೀಲನೆ ಮಾಡುತ್ತೆವೆ. ಹೈಕಮಾಂಡ್ ಗೆ ಮನವಿ ಮಾಡಿಕೊಳ್ಳುತ್ತೆವೆ.ನಮಗೆ ನೋವಾಗಿದೆ ಎಂದು ರಮೇಶ ಜಾರಕಿಹೊಳಿ ಹೇಳಿದರು. ನಿನ್ನೆ ತಡರಾತ್ರಿ ಮಾತನಾಡಿದ್ದೆನೆ ಶೀಘ್ರದಲ್ಲಿ ಸಮಸ್ಯೆ ಬಗೆಹರಿಯುತ್ತೆ. ಯತ್ನಾಳ ಆಗಲಿ ನಾನಾಗಲಿ ನಮ್ಮ ಟೀಂ ಆಗಲಿ ಬಿಜೆಪಿಯಲ್ಲೆ ಮುಂದುವರೆಯುತ್ತೆವೆ. ಹೈಕಮಾಂಡ್ ಮೇಲೆ ಸಂಪೂರ್ಣ ವಿಶ್ವಾಸವಿದೆ. ಯಾರ ಕೈವಾಡ ಇದೆ ಅನ್ನೋದು ಹೇಳುವುದಿಲ್ಲ. ಯತ್ನಾಳ ಅವರು ಒಂಟಿಯಾಗಿಲ್ಲ ನಾವು ಗಟ್ಟಿಯಾಗಿದ್ದೆವೆ ಅವರ ಪರ ಇದ್ದೆವೆ. ಹೈಕಮಾಂಡ್ ಜೊತೆಗೆ ನಿನ್ನೆ ರಾತ್ರಿ ಮಾತನಾಡಿದ್ದೆನೆ ಪಕ್ಷದಲ್ಲಿ ಹೈಕಮಾಂಡ್ ಮನವರಿಕೆ ಮಾಡಿ ಪತ್ರ ಕೊಡುತ್ತೆವೆ.ಪಕ್ಷಕ್ಕೆ ಯತ್ನಾಳ ನ್ಯಾಯುತವಾಗಿ ದುಡಿದಿದ್ದಾರೆ.‌ನೋವಾದ್ರೂ ಪಕ್ಷದ ವಿರುದ್ಧ ಮಾತನಾಡಬೇಎ ಅಂತ ಹೇಳಿದ್ದೆವೆ. ರಾಷ್ಟ್ರೀಯ ನಾಯಕರ ಜೊತೆಗೆ ಮಾತನಾಡಿದ್ದೆವೆ. ಆದಷ್ಟು ಬೇಗ ಸರಿಯಾಗುತ್ತೆ ಎಂದ ರಮೇಶ ಜಾರಕಿಹೊಳಿ. ಯತ್ನಾಳ ಉಚ್ಛಾಟನೆ ನಿರೀಕ್ಷೆ ಇತ್ತು ವಿರೋಧಿ ಬಣಕ್ಕೂ ಇದು ಎಚ್ಚರಿಕೆ ಗಂಟೆ ಯತ್ನಾಳ ಮತ್ತೆ ಬಿಜೆಪಿಗೆ ವಾಪಸ್ ಬರ್ತಾರೆ ಎಂದು ರಮೇಶ ಹೇಳಿದ್ದಾರೆ.

TV24 News Desk
the authorTV24 News Desk

Leave a Reply