ಶವ ಪತ್ತೆಯಾಗುತ್ತಿದ್ದಂತೆ ಊರು ಬಿಟ್ಟವರ ಬಂಧಿಸಿದ ಘಟಪ್ರಭಾ ಪೊಲೀಸರು.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಬಳಿ ನಡೆದಿದ್ದ ಘಟನೆ.
ಹನಮಂತ ಗೋಪಾಲ್ ತಳವಾರ(35) ಕೊಲೆಯಾದ ದುರ್ದೈವಿ
ಬಸವರಾಜ್ ತಳವಾರ್ ಹಾಗೂ ಗ್ಯಾಂಗ್ ನಿಂದ ಕೊಲೆ.
ಕೊಲೆಯಾದ ಹನಮಂತ ಹಾಗೂ ಆರೋಪಿ ಬಸವರಾಜ್ ಸಹೋದರರು.
ಕೊಲೆಯಾದ ಹನಮಂತ ಹೆಸರಲ್ಲಿ 50 ಲಕ್ಷ ಇನ್ಸೂರೇನ್ಸ್ ಮಾಡಿಸಿದ್ದ ಬಸವರಾಜ್.
ಅಣ್ಣ ಸತ್ತರೆ ತನಗೆ ಲಾಭ ಎಂದು ಭಾವಿಸಿ ಅಣ್ಣನಿಗೆ ಚಟ್ಟ ಕಟ್ಟಿದ ಸಹೋದರ.
ಕಂಠಪೂರ್ತಿ ಕುಡಿಸಿ ತನ್ನ ಗ್ಯಾಂಗ್ ನೊಂದಿಗೆ ಅಣ್ಣನನ್ನು ಕರೆದೊಯ್ದಿದ್ದ ಸಹೋದರ.
ಶ್ರೀಗಂಧದ ಕಟ್ಟಿಗೆಗಳಿವೆ ಅದನ್ನು ತರಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದ ಚಾಲಾಕಿ.
ಈ ವೇಳೆ ಹನಮಂತನ ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಗಳು.
ಬಸವರಾಜ್ ತಳವಾರ,ಬಾಪು ಶೇಖ್ ಈರಪ್ಪ ಹಡಗಿನಾಳ,ಸಚಿನ್ ಕಂಟೆನ್ನವರ್ ಬಂಧಿತ ಆರೋಪಿಗಳು.
ಕೊಲೆ ಮಾಡಿ ಊರು ಬಿಟ್ಟಿದ್ದ ನಾಲ್ವರು ಆರೋಪಿಗಳು.
ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು.
ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.