ಖಾನಾಪುರ: ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಧಾರುಣ ಘಟನೆ ಖಾನಾಪುರ ಪಟ್ಟಣದಲ್ಲಿ ಸಂಭವಿಸಿದೆ.ಬೆಳಗಾವಿ ಗೋವಾ ರಸ್ತೆಯ ಮೇಲೆಯ ಬರುತ್ತಿದ ಟಿಪ್ಪರ್ ಲಾರಿ ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಒಬ್ಬ ಗಂಭೀರ ಗಾಯಗೊಂಡಿದ್ದಾನೆ. ಮೃತಪಟ್ಟವರಲ್ಲಿ ಖಾನಾಪೂರ ತಾಲೂಕಿನ ಹಿಂಡಲಗಿ ಗ್ರಾಮದ ಪ್ರದೀಪ ಮಾರುತಿ ಕೋಲ್ಕಾರ (27), ಮತ್ತು ಅವರ ಸಂಬಂಧಿ ಯುವತಿ ಐಶ್ವರ್ಯ ಗುರಣ್ಣವರ (20 ) , ಮೃತ ದುರ್ದೈವಿಗಳು..ಅಲ್ಲಿಯೇ ಇನ್ನೊಂದು ದ್ವಿಚಕ್ರ ವಾಹನ ಸವಾರರಿಗೂ ಗಂಭೀರವಾಗಿ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತರು ಪ್ರವೀಣ ಕೋಲಕಾರ ಮತ್ತು ಅವರ ಮಗಳು ಎಂದು ಗುರುತಿಸಲಾಗಿದೆ. ಪ್ರದೀಪ ಮಾರುತಿ ಕೋಲ್ಕಾರ ಅವರ ಸಂಬಂಧಿ ಐಶ್ವರ್ಯ ಗುರಣ್ಣವರನ್ನು ಖಾನಾಪುರಕ್ಕೆ ಬಿಡಲು ಹೋಗುವ ಸಂದರ್ಭದಲ್ಲಿ ರುಮೇವಾಡಿ ನಾಕಾ ಸಮೀಪ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಖಾನಾಪುರ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದರು. ಖಾನಾಪುರ ಪೊಲೀಸ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
tv24plus.in > Blog > ಜಿಲ್ಲೆ > ಬೆಳಗಾವಿ > ಟಿಪ್ಪರ್ ಲಾರಿ ಬೈಕ್ ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು