ದಿವಂಗತ ಪವರ್ಸ್ಟಾರ್ ಪುನೀತ್ರಾಜ್ಕುಮಾರ್ ಫ್ಯಾನ್ಸ್ನ ಕೋಪ ಕೆರಳಿಸುವಂತಹ ಕೆಲಸ ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆಯಲ್ಲಿ ನಡೆದಿದೆ.
ಅಪ್ಪುವಿಗೆ ಗೌರವ ಸಲ್ಲಿಸುವ ಸಲುವಾಗಿ ರಾಜ್ಯದ ಅನೇಕ ಗ್ರಾಮಗಳಲ್ಲಿ ಪುನೀತ್ ರಾಜ್ಕುಮಾರ್ ಅವರ ನಾಮಫಲಕ ಹಾಗೂ ಪ್ರತಿಮೆಗಳನ್ನು ಸ್ಥಾಪಿಸಿ ಅಭಿಮಾನಿಗಳು ತಮ್ಮ ಪ್ರೇಮವನ್ನು ಮೆರೆದಿದ್ದಾರೆ.
ಶಿವಮೊಗ್ಗದ ರಿಪ್ಪನ್ಪೇಟೆಯಲ್ಲೂ ಕೂಡ ಅಪ್ಪು ಫ್ಯಾನ್ಸ್ ಪ್ರತಿಮೆ ಹಾಗೂ ನಾಮಫಲಕವನ್ನು ಸ್ಥಾಪಿಸಿದ್ದು , ಯಾರೋ ಕಿಡಿಗೇಡಿಗಳು ಅಪ್ಪು ಪ್ರತಿಮೆಯನ್ನು ನೆಲಕ್ಕುರಿಳಿಸಿ ಭಗ್ನಗೊಳಿಸಿರುವುದಲ್ಲದೆ, ನಾಮಫಲಕಕ್ಕೆ ಬಣ್ಣ ಬಳಿದು ಅಪಮಾನವೆಸಗಿದ್ದಾರೆ.