ನಿಪ್ಪಾಣಿ : ನಿಪ್ಪಾಣಿ ತಾಲೂಕ್ಕಾಗಿ ಪರಿವರ್ತನೆಗೊಂಡು ಮೂರು ವರ್ಷ ಕಳೆದರೂ ಇನ್ನೂವರೆಗೆ ಬಹಳಷ್ಟು ಇಲಾಖೆಗಳ ಕಚೇರಿಗಳು ನಿಪ್ಪಾಣಿಗೆ ಶಿಫ್ಟ್ ಆಗಿಲ್ಲಾ ಅಂತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರಾಜ್ಯ ಉಪಾಧ್ಯಕ್ಷರಾದ ಶಿವಾನಂದ ಮುಗಳಿಹಾಳ ಬೇಸರ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ತಾಲೂಕಿನ ತಹಶೀಲ್ದಾರ್ ಅವರಿಗೆ ಮನವಿಸಲ್ಲಿಸಿದ ರೈತ ಮುಖಂಡರು, ನಿಪ್ಪಾಣಿ ತಾಲೂಕ್ಕಾಗಿ ಪರಿವರ್ತನೆಗೊಂಡು ಮೂರು ವರ್ಷ ಕಳೆದರೂ ಇನ್ನೂವರೆಗೆ ಬಹಳಷ್ಟು ಇಲಾಖೆಗಳು ನಿಪ್ಪಾಣಿಗೆ ಸ್ಥಳಾಂತರಗೊಂಡಿಲ್ಲ ಇದರಿಂದ ಸಾರ್ವಜನಿಕರು ಹಾಗೂ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ಉಳಿದ ಇಲಾಖೆಗಳನ್ನು ನಿಪ್ಪಾಣಿಗೆ ಸ್ಥಳಾಂತರಿಸಿ, ನಿಪ್ಪಾಣಿ ತಾಲೂಕಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ತಾಲೂಕಿನಲ್ಲಿ ಹಲವಾರು ರೈತರ ಸಮಸ್ಯೆ ಇದ್ದು ಎಲ್ಲ ಸಮಸ್ಯೆಗಳನ್ನು ಈ ಕೂಡಲೇ ಬಗೆಹರಿಸಬೇಕು ಇಲ್ಲವಾದಲ್ಲಿ ಬರುವಂತ ದಿನಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶಿವಾನಂದ್ ಮುಗಳಿಹಾಳ ಅವರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಚಿನ್ನಪ್ಪ ಪೂಜಾರಿ, ಗಣೇಶ್ ಇಳಿಗೇರ, ರಾಜು ಪವಾರ್, ರಮೇಶ್ ಪಾಟೀಲ್ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.
tv24plus.in > Blog > ಜಿಲ್ಲೆ > ಬೆಳಗಾವಿ > ನಿಪ್ಪಾಣಿಗೆ ಕಚೇರಿಗಳನ್ನು ಶಿಫ್ಟ್ ಮಾಡಿ:ಮುಗಳಿಹಾಳ