ಬೆಳಗಾವಿ ನಗರ ಪೊಲೀಸ್ ಆಯುಕ್ತರುರಿಂದ ಬಹುಮಾನ ಘೋಷಣೆ
ಬೆಳಗಾವಿ: ಶಿವಬಸವ ನಗರದಲ್ಲಿ ನಾಗರಾಜ ಈರಪ್ಪ ಗಾಡಿವಡ್ಡರ ಎಂಬ ಯುವಕನನ್ನು ಯಾರೋ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದರು , ಈ ಬೆಳಗಾವಿ ಜನರನ್ನು ಬೆಚ್ಚಿ ಬೀಳಿಸಿತ್ತು. ಮಾಳಮಾರುತಿ ಪೊಲೀಸ್ ಠಾಣೆಯ ವ್ಯಾಪ್ತಿಯ ಸೂಕ್ಷ್ಮವಾಗಿ ಈ ಪ್ರಕರಣವನ್ನು ಪತ್ತೆ ಹಚ್ಚಿದ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಮೆಚ್ಚಿ ಬಹುಮಾನ ಘೋಷಿಸಲಾಗಿದೆ.ಸದರಿ ಪ್ರಕರಣವನ್ನು ಭೇಧಿಸಲು ಶೇಖರ, ಹೆಚ್.ಟಿ, ಐ.ಪಿ.ಎಸ್. ಉಪ ಪೊಲೀಸ್ ಆಯುಕ್ತರು. ಬೆಳಗಾವಿ ನಗರ ರವರ ಮಾರ್ಗದರ್ಶನದಲ್ಲಿ ಎನ್.ವಿ. ಭರಮನಿ, ಎಸಿಪಿ ಮಾರ್ಕೆಟ್ ಉಪ ವಿಭಾಗ ಮತ್ತು ಜೆ.ಎಂ. ಕಾಲಿಮಿರ್ಚಿ, ಪಿ.ಐ. ಮಾಳಮಾರುತಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಈ ತಂಡವು ಸಂಶಯಾಸ್ಪದ ಆರೋಪಿತರ ಬಗ್ಗೆ ಮಹತ್ತರ ಸುಳಿವನ್ನು ಪಡೆದು, ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರದ ಎಲ್.ಸಿ.ಬಿ. ಪೊಲೀಸರ ಸಹಕಾರದೊಂದಿಗೆ ಇಬ್ಬರು ಆರೋಪಿತರಾದ ಪ್ರಥಮೇಶ ಧಮೇರ್ಂದ್ರ ಕಸಬೇಕರ ವಯಸ್ಸು:20 ವರ್ಷ ಸಾ:ರಾಜಾರಾಮಪುರಿ, ಬಾಯಚಾಪ ಚಾಳ ಗಲ್ಲಿ ಕೊಲ್ಲಾಪೂರ, ಆಕಾಶ ಕಾಡಪ್ಪಾ ಪವಾರ ವಯಸ್ಸು: 21 ವರ್ಷ ಸಾ:ರಾಜಾರಾಮ ಚೌಕ ಎ-ವಾರ್ಡ ಕೊಲ್ಲಾಪೂರ ಇವರಿಗೆ ಕೊಲ್ಲಾಪೂರದಲ್ಲಿ ವಶಕ್ಕೆ ಪಡೆದು ವಿಚಾರಿಸಲಾಗಿ ಕೃತ್ಯ ಎಸಗಿದ ಬಗ್ಗೆ ಒಪ್ಪಿಕೊಂಡಿದ್ದು, ಸದರಿ ಆರೋಪಿತರನ್ನು ಬಂಧಿಸಿ ನ್ಯಾಯಾಲದ ಮುಂದೆ ಹಾಜರುಪಡಿಸಿದ್ದು,
ಹೆಚ್ಚಿನ ತನಿಖೆ ಕುರಿತು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ. ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಜಾಲ ಬಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳಾದ ಮಾರ್ಕೆಟ್ ಉಪ ವಿಭಾಗದ ಎಸಿಪಿ: ನಾರಾಯಣ ಭರಮನಿ, ಪೊಲೀಸ್ ಇನ್ಸ್ಪೆಕ್ಟರ್ ಕಾಲಿಮಿರ್ಚಿ, ಪಿಎಸ್ಐಗಳಾದ ಹೊನ್ನಪ್ಪ ತಳವಾರ, ಶ್ರೀಶೈಲ ಹಾಗೂ ಸಿಬ್ಬಂದಿ ಜನರಾದ ಕುಂಡೆದ, ಚಿನ್ನಪ್ಪಗೋಳ, ಬಸ್ತವಾಡ, ಗೌರಾಣಿ, ಹೊಸಮನಿ ಮತ್ತು ಮುಜಾವರ ರವರ ಕಾರ್ಯಕ್ಷಮತೆಯನ್ನು ಮೆಚ್ಚಿ ಬೆಳಗಾವಿ ನಗರ ಪೊಲೀಸ್ ಆಯುಕ್ತರು,.ಬಹುಮಾನ ಘೋಷಿಸಿದ್ದಾರೆ