ಗೋಕಾಕ: ಮೂಡಲಗಿ ಹಾಗೂ ಶಿವಾಪೂರ ಪ್ರದೇಶದ ಹೊಲಗದ್ದೆಗಳಲ್ಲಿ ಚಿರತೆ ಕಂಡು ಬಂದಿದ್ದು ಈ ಪ್ರದೇಶದ ಜನರಿಗೆ ಎಚ್ಚರಿಕೆಯಿಂದ ಇರಲು ಅರಣ್ಯ ಇಲಾಖೆ ಹಾಗೂ ಪೊಲೀಸ ಇಲಾಖೆಯವರು ಸೂಚನೆ ನೀಡಿದ್ದಾರೆ.
ಶಿವಾಪುರ ಗ್ರಾಮದ ಕಬ್ಬು, ಮೆಕ್ಕಜೋಳ ಹಾಗೂ ಖಾಲಿ ಪ್ರದೇಶಗಳಲ್ಲಿ ಚಿರತೆ ಓಡಾಡುತ್ತಿರುವ ವೈರಲ್ ಆಗಿದೆ. ಅಲ್ಲದೆ, ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ.ಈ ಹಿನ್ನೆಲೆ ಅರಣ್ಯ ಇಲಾಖೆ, ಪೊಲೀಸರು ಚಿರತೆ ಹಿಡಿಯಲು ಕಾರ್ಯಚರಣೆ ಕೈಗೊಂಡಿದ್ದಾರೆ. ಅಲ್ಲದೆ, ಚಿರತೆ ಓಡಾಡಿರುವ ಪ್ರದೇಶಗಳಲ್ಲಿ ಜನರು ಓಡಾಡದಂತೆ, ಕೃಷಿ ಜಮೀನುಗಳಲ್ಲಿ ಕೆಲಸ ಮಾಡದಂತೆ ಅರಣ್ಯ ಇಲಾಖೆ ಹಾಗೂ ಪೊಲೀಸ ಇಲಾಖೆ ಎಚ್ಚರಿಕೆ ನೀಡಿದೆ.