ಬೆಳಗಾವಿಬೆಳಗಾವಿ ನಗರ

ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ರಕ್ಷಿಸಿದ  ಪೊಲೀಸ್ ಪೇದೆ 

ನಿರಿನಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಪೊಲೀಸ ಪೇದೆ  ಕಾಶಿನಾಥ್ ಈರಗಾರ 

ಬೆಳಗಾವಿ : ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು  ಕರ್ತವ್ಯ ನಿರತ ಉತ್ತರ ಸಂಚಾರಿ ಠಾಣೆಯ   ಪೊಲೀಸ ಕಾನ್ಸ್ಟೇಬಲ್ ಕಾಶಿನಾಥ್ ಈರಗಾರ ರವರು ಜೀವನದ ಹಂಗು ತೊರೆದು ಕೆರೆಗೆ ಹಾರಿ ರಕ್ಷಣೆ ಮಾಡಿದ್ದಾರೆ

ಮಹಿಳೆಯೊಬ್ಬಳು  ಬೆಳಗಾವಿ ನಗರದ ಕಿಲ್ಲಾ ಕೆರೆಗೆ ಮಹಿಳೆಯೊಬ್ಬಳು ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಆ ವೇಳೆ ಮಹಿಳೆ  ಮುಳುಗುತ್ತಿರುದನ್ನು ನೋಡಿದ ಕರ್ತವ್ಯ ನಿರತ ಉತ್ತರ ಸಂಚಾರಿ ಠಾಣೆಯ   ಪೊಲೀಸ ಕಾನ್ಸ್ಟೇಬಲ್ ಕಾಶಿನಾಥ್ ಈರಗಾರ  ಹಿಂದೆಮುಂದೆ ಯೋಚಿಸದೆ, ಪ್ರಾಣದ ಹಂಗು ತೊರೆದು ಕೆರೆಗೆ ಹಾರಿ  ಆ ಮಹಿಳೆಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯ  ಹೆಸರು ಶಿವಲೀಲಾ ಪರ್ವತಗೌಡ್ರ ಎಂದು’ತಿಳಿದು ಬಂದಿದೆ. ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

10 ಅಡಿಗೂ ಅಧಿಕ ಆಳವಿದ್ದ ಕೆರೆ ಇದ್ದರು ಸಹಿತ ಪ್ರಾಣದ ಭಯ ಪಡದೆ ರಕ್ಷಣೆ  ಮಹಿಳೆಯನ್ನು ಮಾಡಿದ್ದಾರೆ . ಪೊಲೀಸ ಕಾನ್ಸ್ಟೇಬಲ್ ಕಾಶಿನಾಥ್  ಈ ಸಾಹಸಕ್ಕೆ ಎಲ್ಲರ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಗುತ್ತಿದೆ. ಬೆಳಗಾವಿ ಪೊಲೀಸ್ ಆಯುಕ್ತರು ಇವರಿಗೆ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.

TV24 News Desk
the authorTV24 News Desk

Leave a Reply