ನಿರಿನಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಪೊಲೀಸ ಪೇದೆ ಕಾಶಿನಾಥ್ ಈರಗಾರ
ಬೆಳಗಾವಿ : ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಕರ್ತವ್ಯ ನಿರತ ಉತ್ತರ ಸಂಚಾರಿ ಠಾಣೆಯ ಪೊಲೀಸ ಕಾನ್ಸ್ಟೇಬಲ್ ಕಾಶಿನಾಥ್ ಈರಗಾರ ರವರು ಜೀವನದ ಹಂಗು ತೊರೆದು ಕೆರೆಗೆ ಹಾರಿ ರಕ್ಷಣೆ ಮಾಡಿದ್ದಾರೆ
ಮಹಿಳೆಯೊಬ್ಬಳು ಬೆಳಗಾವಿ ನಗರದ ಕಿಲ್ಲಾ ಕೆರೆಗೆ ಮಹಿಳೆಯೊಬ್ಬಳು ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಆ ವೇಳೆ ಮಹಿಳೆ ಮುಳುಗುತ್ತಿರುದನ್ನು ನೋಡಿದ ಕರ್ತವ್ಯ ನಿರತ ಉತ್ತರ ಸಂಚಾರಿ ಠಾಣೆಯ ಪೊಲೀಸ ಕಾನ್ಸ್ಟೇಬಲ್ ಕಾಶಿನಾಥ್ ಈರಗಾರ ಹಿಂದೆಮುಂದೆ ಯೋಚಿಸದೆ, ಪ್ರಾಣದ ಹಂಗು ತೊರೆದು ಕೆರೆಗೆ ಹಾರಿ ಆ ಮಹಿಳೆಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯ ಹೆಸರು ಶಿವಲೀಲಾ ಪರ್ವತಗೌಡ್ರ ಎಂದು’ತಿಳಿದು ಬಂದಿದೆ. ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
10 ಅಡಿಗೂ ಅಧಿಕ ಆಳವಿದ್ದ ಕೆರೆ ಇದ್ದರು ಸಹಿತ ಪ್ರಾಣದ ಭಯ ಪಡದೆ ರಕ್ಷಣೆ ಮಹಿಳೆಯನ್ನು ಮಾಡಿದ್ದಾರೆ . ಪೊಲೀಸ ಕಾನ್ಸ್ಟೇಬಲ್ ಕಾಶಿನಾಥ್ ಈ ಸಾಹಸಕ್ಕೆ ಎಲ್ಲರ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಗುತ್ತಿದೆ. ಬೆಳಗಾವಿ ಪೊಲೀಸ್ ಆಯುಕ್ತರು ಇವರಿಗೆ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.