ಲಕ್ಷಾಂತರ ರೂಗಳ ಬೆಳ್ಳಿ ಬಂಗಾರ ಆಭರಣಗಳನ್ನು ವಶಪಡಿಸಿಕೊಂಡ ಪೊಲೀಸರು
ಬೆಳಗಾವಿ:ನಗರದಲ್ಲಿ ಹಲವಾರು ದಿನಗಳಿಂದ ಮನೆಗಳ್ಳತನ ಮಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಟಿಳಕವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ
ಭಾಗ್ಯ ನಗರ ಮತ್ತು ಮೃತ್ಯುಂಜಯ ನಗರಗಳ ಎರಡು ಮನೆಗಳಲ್ಲಿ ಯಾರೋ ಕಳ್ಳರು ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ದೂರುದಾರರು ನೀಡಿದ ಹಿನ್ನೆಲೆಯಲ್ಲಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಎರಡು ಪ್ರತ್ಯೇಕ ಮನೆ ಕಳುವು ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿಯನ್ನಾಧರಿಸಿ ಟಿಳಕವಾಡಿ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯವರ ತಂಡ ಆರೋಪಿ ಅನೀಲಕುಮಾರ ಮಿಶ್ರೀಲಾಲ ರಾಜಬರ (36) ಇವನು
ಉತ್ತರ ಪ್ರದೇಶ ರಾಜ್ಯದವನೆಂದು ತಿಳಿದುಬಂದಿದ್ದು ಈತನನ್ನ ವಶಕ್ಕೆ ಪಡೆದುಕೊಂಡು, ಅವನಿಂದ ಒಟ್ಟು 4 ಲಕ್ಷ ರೂಗಳ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.