ಬೆಳಗಾವಿ

ಜೈನಮುನಿ ಹತ್ಯೆ ಪ್ರಕರಣ ತನಿಖೆ ಚುರುಕುಗೊಳಿಸಿದ ಪೊಲೀಸರು 

ಚಿಕ್ಕೋಡಿ: ಜೈನಮುನಿ ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ  ಜೈನಮುನಿಗಳ ಡೈರಿ ರಹಸ್ಯ ಕೆದಕುತ್ತಿದ್ದಾರೆ.ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನ್ ದಲಾಯತ್ ನಿಂದ ಚಿಕ್ಕೋಡಿ ಪೊಲೀಸರು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.ಚಿಕ್ಕೋಡಿ ಡಿವೈಎಸ್‌ಪಿ ಬಸವರಾಜ ಯಲಿಗಾರ ನೇತೃತ್ವದಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಜುಲೈ 17ರವರೆಗೆ ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಗೆ ಹಿನ್ನೆಲೆ ತೀವ್ರ ವಿಚಾರಣೆ ಆಗುತ್ತಿದೆ.ಹಲವು ಟೆಕ್ನಿಕಲ್ ಎವಿಡೆನ್ಸ್ ಕಲೆಕ್ಟ್ ಮಾಡಿರುವ ಪೊಲೀಸರು,ಜೈನಮುನಿಗಳ ಪರ್ಸನಲ್‌ ಡೈರಿ ಸುಟ್ಟು ಹಾಕಿದ್ಸ ಸ್ಥಳ ತೋರಿಸಿರುವ ಇಬ್ಬರು ಆರೋಪಿಗಳು,ಸುಟ್ಟ ಡೈರಿಯ ಬೂದಿ ಎಫ್‌ಎಸ್‌ಎಲ್‌ಗೆ ರವಾನಿಸಲು ಸಿದ್ಧತೆ ನಡೆಸಲಾಗುತ್ತಿದೆ.ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ಇಂದು ಮೂರನೇ ದಿನವೂ ಚಿಕ್ಕೋಡಿ ಪೊಲೀಸರಿಂದ ತನಿಖೆ ನಡೆಯುತ್ತಿದ್ದು,ನಿನ್ನೆ ಇಡೀ ದಿನ ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡಲಾಗುತ್ತಿದೆ.
TV24 News Desk
the authorTV24 News Desk

Leave a Reply