ಕಲಬುರ್ಗಿ

ಹೆಡ್‍ಕಾನ್‍ಸ್ಟೇಬಲ್ ಮೇಲೆ ಟ್ರ್ಯಾಕ್ಟರ್‍ ಹರಿಸಿ ಹತ್ಯೆ

ಮರಳು ಮಾಫಿಯಾಗೆ ಪೊಲೀಸ್ ಮುಖ್ಯ ಪೇದೆ ಬಲಿ …! 
ಕಲಬುರಗಿ, ಅಕ್ರಮ ಮರಳು ಸಾಗಾಟ ತಡೆಯಲು ಹೋದ ಹೆಡ್‍ಕಾನ್‍ಸ್ಟೇಬಲ್ ಮೇಲೆ ಟ್ರ್ಯಾಕ್ಟರ್‍ ಹರಿಸಿ ಹತ್ಯೆಮಾಡಿರುವ ಘಟನೆ ಜೇವರ್ಗಿಯ ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಫಜಲಪುರ ತಾಲೂಕಿನ ಚೌಡಾಪೂರ್ ತಾಂಡಾ ನಿವಾಸಿ ಹೆಡ್ ಕಾನ್‍ಸ್ಟೇಬಲ್ ಮೈಸೂರ್ ಚೌಹಾಣ್ (51) ಕೊಲೆಯಾದವರು.
 
ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಈ ಘಟನೆ ನಡೆದಿದ್ದು, ಅಕ್ರಮ ಮರಳು ಸಾಗಾಟ ಹಿನ್ನೆಲೆಯಲ್ಲಿ ಕಳೆದ ರಾತ್ರಿ 10ರ ಸುಮಾರಿಗೆ ಚೌಹಾಣ್ ಅವರು ಬೈಕ್‍ನಲ್ಲಿ ತಪಾಸಣೆಗೆ ಹೋಗಿದ್ದರು. ಆ ವೇಳೆ ದುಷ್ಕರ್ಮಿಗಳು ಅಡ್ಡ ಬಂದು ತಡೆಯಲು ಮುಂದಾದಾಗ ಅವರ ಮೇಲೆ ಟ್ರ್ಯಾಕ್ಟರ್ ಹರಿಸಿದ್ದಾರೆ. ಮೈಸೂರ್ ಚೌಹಾನ್ ಅವರು ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
 
ಚೌಹಾಣ್ ಅವರು ನೆಲೋಗಿ ಠಾಣೆಯಲ್ಲಿ ಹೆಡ್ ಕಾನ್‍ಸ್ಟೇಬಲ್‍ಆಗಿ ಕಳೆದ 2 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು. ಮಾಹಿತಿ ತಿಳಿದು ತಡ ರಾತ್ರಿ ಪೊಲೀಸರು ಹಾಗು ಸಂಭಂಧಿಕರು ಸ್ಥಳಕ್ಕೆ ಬೇಟಿ ನೀಡಿದಾಗ ಭೀಕರ ಘಟನೆ ನೋಡಿ ಬೆಚ್ಚಿಬಿದ್ದಿದ್ದಾರೆ.
TV24 News Desk
the authorTV24 News Desk

Leave a Reply