ಬೆಳಗಾವಿ

ಪಂಚಾಯತ ಅಧ್ಯಕ್ಷ ಎಂದು ನಮೂದಿಸಿ ಪೇಚಿಗೆ ಸಿಲುಕಿದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ..! 

ಖಾನಾಪುರ: ತಾನು ಪಂಚಾಯತ ಅಧ್ಯಕ್ಷನಲ್ಲದಿದ್ದರೂ ತನ್ನ ಲೆಟರ್ ಹೆಡ್ ನಲ್ಲಿ ಭೂರಣಕಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಂದು ನಮೂದಿಸಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಂಎಂ ಸಾಹುಕಾರ್ ಪೇಚಿಕೆ ಸಿಲುಕಿದ್ದಾರೆ.
ಜೆಡಿಎಸ್ ಪಕ್ಷಕ್ಕೂ ಕಣ್ಣಿಗೆ ಮಣ್ಣೆರೆಚಿದ ಎಂಎಂಸಾಹುಕಾರ
ಹಾಲಿ ಅಧ್ಯಕ್ಷರಾದ ಮುಬಾರಕ ಕಿತ್ತೂರ ಅವರಿದ್ದರೂ ಕೂಡ ತನ್ನ ಲೆಟರ್ ಹೆಡ್ ನಲ್ಲಿ ಬೂರಣಕಿ ಅಧ್ಯಕ್ಷರು ಎಂದು ನಮೂದಿಸಿದ್ದು ಪಂಚಾಯತಿಗಲ್ಲದೆ ಜೆಡಿಎಸ್ ಪಕ್ಷಕ್ಕೂ ಮುಜುಗುರ ತರಿಸಿದೆ ಅಲ್ಲದೇ ಭೂರಣಕಿ ಪಂಚಾಯತ ಅಧ್ಯಕ್ಷ ಎಂದು ಸುಳ್ಳು ಹೇಳಿ ಅಧ್ಯಕ್ಷ ಸ್ಥಾನ ಪಡೆದರಾ ಎನ್ನುವ ಚರ್ಚೆಗಳು ಪ್ರಾರಂಭವಾಗಿವೆ ಅಥವಾ ಈ ವಿಷಯ ಖಾನಾಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜೆಡಿಎಸ್ ಕೋರ್ ಕಮೀಟಿ ಸದಸ್ಯ ನಾಸೀರ್ ಭಾಗವಾನ್ ವಿಷಯ ಗೊತ್ತಿದ್ದೂ ಮುಚ್ಚಿಟ್ಟು ಅಧ್ಯಕ್ಷ ಸ್ಥಾನ ಕೊಟ್ಟರಾ ಅನ್ನುವ ಪ್ರಶ್ನೆಯೂ ಕಾರ್ಯಕರ್ತರಲ್ಲಿ ಹುಟ್ಟಿದೆ
ಹಾಲಿ ಅಧ್ಯಕ್ಷರರಿಂದ ರಾಜ್ಯಾಧ್ಯಕ್ಷರಿಗೆ ದೂರು
ಹಾಲಿ ಅಧ್ಯಕ್ಷರಾಗಿರುವ ಮುಬಾರಕ ಕಿತ್ತೂರು ಇವರು ಎಂಎಂ ಸಾಹುಕಾರ್ ಮೇಲೆ ಕೇಸು ದಾಖಲಿಸಿ ಅವರ ಕ್ರಮ ಕೈಗೊಳ್ಳುವ ಕುರಿತು ಜಿಪಂ ಹಾಗೂ ಆಯುಕ್ತರಿಗೆ ದೂರು ಕೂಡ ನೀಡಿದ್ದು
ಅಧ್ಯಕ್ಷ ಸ್ಥಾನದಿಂದ ಎಂಎಂ ಸಾಹುಕಾರ್ ಅವರನ್ನು ಕೈಬಿಡುವಂತೆ ಪಕ್ಷದಲ್ಲಿ ಒತ್ತಡ ಹೆಚ್ಚಾಗಿದೆ ಈ ವಿಷಯ ಪಕ್ಷದ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಅವರಿಗೂ ತಲುಪಿದ್ದು ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸುತ್ತಾರಾ ಕಾದುನೊಡಬೇಕಿದೆ
TV24 News Desk
the authorTV24 News Desk

Leave a Reply