ಚಿಕ್ಕೋಡಿ : ಕೇಂದ್ರ ಸರ್ಕಾರ ನೋಟು ಬದಲಾವಣೆಗೆ ಅವಕಾಶ ನೀಡಿದ ಬೆನ್ನಲ್ಲೇ ನಮ್ಮ ಬಳಿ ಇರುವ 500 ಮುಖ ಬೆಲೆಯ 5,00,000 ರೂ ನೀಡಿದರೆ ಇವರು 2,000 ಮುಖ ಬೆಲೆಯ 6,00,000 ರೂ ಕೊಡುವುದಾಗಿ ಒಪ್ಪಿಗೆ ಆಗಿದ್ದು ಇವರು ಹಣ ಬವದಲಾವಣೆಯನ್ನ ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಬಳಿ ಹಣ ಬದಲಾವಣೆ ಮಾಡಲು ಮುಂದಾಗುತ್ತಾರೆ. 500 ರೂ ಮುಖ ಬೆಲೆಯ 5 ಲಕ್ಷ ನೋಟು ಕೊಟ್ಟು 2 ಸಾವಿರ ಮುಖ ಬೆಲೆಯ 6 ಲಕ್ಷ ಪಡೆಯರಿ ಎಂದು ನಂಬಿಸಿ ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಿದ್ದ ಮಹಾರಾಷ್ಟ್ರ ಮೂಲದ ಮೂವರನ್ನ ಬಂಧನ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮಹಾರಾಷ್ಟ್ರ ಮೂಲದ ಸಮೀರ್ ಭೋಸಲೇ ಎಂಬುವರಿಗೆ ಐದು ಲಕ್ಷ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಸಮೀರನ್ನು ಕರೆಸಿ ಸಮೀರ್ ಭೋಸಲೇ ಕಡೆಯಿಂದ 500 ಮುಖ ಬೆಲೆಯ 5 ಲಕ್ಷ ಹಣ ಪಡೆದು ಪೋಲಿಸರು ಬಂಧಿಸಿದ್ದಾರೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾರೆ. ಸಮೀರ ಕಡೆಯಿಂದ ಹಣ ಪಡೆದು ತಕ್ಷಣ ಪೋಲಿಸರು ಬಂದ್ರು ಎಂದು ಹೇಳಿ ಕೂಡಲೇ ಎಸ್ಕೇಪ್ ಆಗಿದ ಆರೋಪಿಗಳನ್ನ ಕಾಗವಾಡ ಪೋಲಿಸರು ಹೆಡೆಮುರಿ ಕಟಿದ್ದಾರೆ. ಮಹಾರಾಷ್ಟ್ರ ಮೂಲದ ಸಾಗರ ಜಾಧವ್, ಆರೀಫ್, ಲಕ್ಷ್ಮಣ್ ನಾಯಕ್ ಬಂಧಿತ ಆರೋಪಿಗಳು.
ಕೇಂದ್ರ ಸರ್ಕಾರ ನೋಟು ಬದಲಾವಣೆಗೆ ಅವಕಾಶ ನೀಡಿದ ಬೆನ್ನಲ್ಲೇ ತಲೆ ಎತ್ತಿದ ನೋಟು ಬದಲಾವಣೆ ಜಾಲ. ಪ್ರಕರಣ ದಾಖಲಾಗಿ ಒಂದೇ ದಿನದಲ್ಲಿ ಪ್ರಕರಣ ಬೇಧಿಸಿದ ಕಾಗವಾಡ ಪೊಲೀಸರು. ಈ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.