ಬೆಳಗಾವಿ:ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಕಾಂಗ್ರೆಸ್ಗೆ ಭರ್ಜರಿ ಬಹುಮತ ಖಚಿತವಾಗಿದೆ. ಈ ಬಗ್ಗೆ ಸುದ್ದಿಗಾರರಿಗೆ ಮೊದಲ ಪ್ರತಿಕ್ರಿಯೆ ನೀಡಿದ ಶಾಸಕ ಮಹೇಂದ್ರ ತಮ್ಮಣ್ಣವರ
ಧರ್ಮ, ಅಧರ್ಮದ ನಡುವೆ ನಡೆದ ಚನಾವಣೆಯಲ್ಲಿ ಕುಡುಚಿ ಮತಕ್ಷೇತ್ರದ ಜನರು ನನಗೆ ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದಾರೆ. ಅವರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡುತ್ತೇನೆ ಎಂದು ಕುಡುಚಿ ಕಾಂಗ್ರೆಸ್ ನೂತನ ಶಾಸಕರಾಗಿ ಮಾತನಾಡಿದ ಅವರು, ಜಾತಿ, ಜಾತಿ ನಡುವೆ ಜಗಳ, 40 ಪ್ರತಿಶತ ಕಮಿಷನ್ ಹಗರಣ, ಬೆಲೆ ಏರಿಕೆ ಪಿಎಸ್ ಐ ಹಗರಣದಿಂದ ಜನ ಬೇಸತ್ತು ಬದಲಾವಣೆ ಬಯಸಿದ್ದಾರೆ. ಈ ಬಾರಿ ಕುಡುಚಿಯಲ್ಲಿ ಜನ ಬದಲಾವಣೆ ಬಯಸಿ ನನ್ನನ್ನು ಗೆಲ್ಲಿಸಿದ್ದಾರೆ ಎಂದರು.