ಸವದತ್ತಿ: ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ರತ್ನಾ ಮಾಮನಿ ಗೆಲ್ಲುವುದು ಅಷ್ಟೇ ಸತ್ಯ ಎಂದು ಮಾಜಿ ಸಿಎಮ್ ಬಿಎಸ್ ಯಡಿಯೂರಪ್ಪ ಸವದತ್ತಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ಸವದತ್ತಿಯ ತಾಲೂಕ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಎಸ್ ಯಡಿಯೂರಪ್ಪ ಮಾತನಾಡುತ್ತ ಸವದತ್ತಿ ಮತಕ್ಷೇತ್ರದಲ್ಲಿ ಯಾವುದೇ ಶಕ್ತಿ ರತ್ನಾ ಮಾಮನಿ ಗೆಲವು ತಡೆಯಲು ಸಾಧ್ಯ ಇಲ್ಲ ಹಾಗೂ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ರತ್ನಾ ಮಾಮನಿ ಗೆಲ್ಲುವುದು ಅಷ್ಟೇ ಸತ್ಯ ಎಂದು ಗುಡುಗಿದರು.
ಇದೆ ವೇಳೆ ಕಾಂಗ್ರೆಸ್ ಪಕ್ಷದ ಹರಿಹಾಯ್ದರು. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಇಡಿ ದೇಶದಲ್ಲಿ ಕಾಂಗ್ರೆಸ್ ಸರ್ವನಾಶ ಆಗಿದೆ ದೇಶದ ಅನೇಕ ರಾಜ್ಯಗಳು ಕಾಂಗ್ರೆಸ್ ವನ್ನು ತಿರಸ್ಕಾರ ಮಾಡಿದೆ ಎಂದು ಕಾಂಗ್ರೆಸ್ ಮೇಲೆ ವಾಕಪ್ರಹಾರ ಮಾಡಿದರು.
ನಾನು ನನ್ನ ರಕ್ತದಲ್ಲಿ ಬರೆದು ಕೊಡುತ್ತೇನೆ 130-135 ಕ್ಷೇತ್ರ ಗೆದ್ದು ಮತ್ತೇ ಬಿಜೆಪಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸದ ಮಾತುಗಳ್ನಾಡಿದರು.
ಇಡಿ ವಿಶ್ವ ಗೆದ್ದಿರುವ ಪ್ರಧಾನ ನರೇಂದ್ರ ಮೋದಿ ಒಂದು ಕಡೆ ಆದರೆ ರಾಹುಲ್ ಗಾಂಧಿ ಒಂದು ಕಡೆ ಹೀಗಿದ್ದಾಗ ಮೋದಿ ಮತ್ತು ರಾಹುಲ್ ಸಮವಾಗ್ತಾರ ಎಂದು ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದರುಮ
ವೀರೇಂದ್ರ ಪಾಟೀಲ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳಿಸಿದರು ಇಂತಹ ಪಕ್ಷವನ್ನು ನೀವು ತಿರಸ್ಕಾರ ಮಾಡಬೇಕು ಎಂದು ಹೇಳಿದರು.
ಇದೆ ವೇಳೆ, ನಾನೆ ಸಿಎಂ ಸ್ಥಾನ ಬಿಟ್ಟು ಚುನಾವಣಾ ನಿಲ್ಲಲ್ಲ ಎಂದಿದೆ ಆದರೆ ಪಕ್ಷವನ್ನು ಅಧಿಕಾರಕ್ಕೆ ತರಲು ನನ್ನ ಜೀವ ಇರುವವರೆಗೆ ಕೆಲಸ ಮಾಡುವೆ ಎಂದು ಹೇಳಿದ್ದೆ ನಾನೇ ಸ್ವತಃ ಸಿಎಮ್ ಹುದ್ದೆ ತ್ಯಜಿಸಿದ್ದೇನೆ ಎಂದರುಮ
ರತ್ನಾ ಮಾಮನಿ ಅವರನ್ನು ತಮ್ಮ ಮನೆ ಮಗಳು ಎಂದು ಗೆಲ್ಲಿಸಬೇಕು ರತ್ನಾ ಮಾಮನಿ ಅವರನ್ನು ಎಲ್ಲರಿಗೂ ಕೂಡಿ ಗೆಲ್ಲಿಸಬೇಕು ಎಂದರು.ಚುನಾವಣೆ ಮುಗಿದ ಬಳಿಕ ರತ್ನಾ ಮಾಮನಿ ಅವರ ವಿಜಯೋತ್ಸವಕ್ಕೆ ಮತ್ತೆ ಬರುವೆ ಎಂದು ಹೇಳಿ ಕಾರ್ಯಕರ್ತರನ್ನು ಹುರಿದುಂಬಿಸಿದರು.