ಬೆಳಗಾವಿ: ಕಳೆದ ೨೦ ವರ್ಷಗಳಿಂದ ನಗರದ ರಾಮತೀರ್ಥ ನಗರದಲ್ಲಿ ಇದುವರೆಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಒಳಚರಂಡಿ ಇಲ್ಲದೆ ಇಲ್ಲಿನ ನಿವಾಸಿಗಳು ನಿತ್ಯ ಕಷ್ಟ ಪಡುವಂತಾಗಿದೆ ಎಂದು ಇಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲಾ ಕಚೇರಿ ಆವರಣದಲ್ಲಿ ಪ್ರತಿಭಟನೆ ಮಾಡಿದರು.
ಚನ್ನಮ್ಮ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿವರಿಗೂ ಸರಕಾರದ ವಿರುದ್ದ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು. ಇದರ ಜೊತೆ ಬಿಜೆಪಿಯ ಸರಕಾರದವರು ಬೆಳಗಾವಿ ನಿಪ್ಪಾಣಿ ಭಾಗದಲ್ಲಿ ಸೋಲಾರ ಪ್ಲ್ಯಾಂಟ್ ನಿರ್ಮಾಣ ಮಾಡುವುದಕ್ಕೆ ರೈತರ ಜಮೀನುಗಳನ್ನು ಯಾವುದೇ ನೋಟಿಸ್ ಹಾಗೂ ರೈತರ ಭೂಮಿಗೆ ಬೆಲೆ ನಿಗದಿ ಮಾಡದೆ ಜಮೀನಗಳನ್ನ ಒತ್ತುವರಿ ಮಾಡುತ್ತಿದ್ದಾರೆ ಎಂದು ರೈತರ ಮೇಲೆ ದೌರ್ಜನ್ಯ ಎಂದು ರೈತ ಮುಖಂಡರು ಆರೋಪಿಸಿದರು.
ಇದೆ ವೇಳೆ ಭ್ರಷ್ಟ ಬಿಜೆಪಿಯ ಶಾಸಕ ವಿರೂಪಾಕ್ಷ ಮಾಡಳ್ ವಿರುದ್ದ ದಿಕ್ಕಾರ ಕೂಗಿದರು. ಇನ್ನು ರಾಮ ತೀರ್ಥನಗರದಲ್ಲಿ ಕಳೆದ ೨೦ ವರ್ಷಗಳಿಂದ ಅಲ್ಲಿನ ನಿವಾಸಿಗಳು ಸರಕಾರದ ಎಲ್ಲ ಇಲಾಖೆಯ ಕರವನ್ನು ತುಂಬುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಅಲ್ಲಿಯ ನಿವಾಸಿಗಳಿಗೆ ಮೂಲಭೂತ ಸೌರ್ಕಗಳಲ್ಲಿ ಒಂದಾದ ಒಳಚರಂಡಿ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರ ಮನವಿ ಮಾಡಿದರು.