ಬೆಳಗಾವಿ: ಬೆಳಗಾವಿಯ ಗಣೇಶಪುರದಲ್ಲಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಆಯುಕ್ತರ ಕಚೇರಿಗೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ಹಾಗೂ ರೈತರು ಸಕ್ಕರೆ ಆಯುಕ್ತರ ಕಚೇರಿ ಬೀಗ್ ಜಡಿಯಲು ಮುಂದಾದರು. ಈ ವೇಳೆ ರೈತರನ್ನ ಬೀಗ ಜಡಿಯದಂತೆ ಪೆÇಲೀಸರು ತಡೆದರು. ನಂತರ ಆಯುಕ್ತರ ಕಚೇರಿ ಬಾಗಿಲಿಗೆ ಹಸಿರು ಟಾವೆಲ್ ಕಟ್ಟಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತರು ಸಕ್ಕರೆ ಆಯುಕ್ತ ಕಚೇರಿ ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡಿದರು.
ಪ್ರತಿ ಟನ್ ಕಬ್ಬಿಗೆ 5500 ರೂಪಾಯಿ ದರ ನಿಗದಿ ಪಡಿಸುವಂತೆ ಆಗ್ರಹಿಸಿ ಬೆಳಗಾವಿಯ ಸಕ್ಕರೆ ಆಯುಕ್ತರ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಹೌದು ಬೆಳಗಾವಿಯ ಗಣೇಶಪುರದಲ್ಲಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಆಯುಕ್ತರ ಕಚೇರಿಗೆ ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು ಹಾಗೂ ರೈತರು ಸಕ್ಕರೆ ಆಯುಕ್ತರ ಕಚೇರಿ ಬೀಗ್ ಜಡಿಯಲು ಮುಂದಾದರು. ಈ ವೇಳೆ ರೈತರನ್ನ ಬೀಗ ಜಡಿಯದಂತೆ ಪೊಲೀಸರು ತಡೆದರು. ನಂತರ ಆಯುಕ್ತರ ಕಚೇರಿ ಬಾಗಿಲಿಗೆ ಹಸಿರು ಟಾವೆಲ್ ಕಟ್ಟಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತರು ಸಕ್ಕರೆ ಆಯುಕ್ತ ಕಚೇರಿ ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡಿದರು.
ಸರ್ಕಾರ, ಸಿಎಂ ಬೊಮ್ಮಾಯಿ ಹಾಗೂ ಸಕ್ಕರೆ ಸಚಿವರ ವಿರುದ್ಧ ಧಿಕ್ಕಾರ ಕೂಗಿದ ಹೋರಾಟಗಾರರು ಸಕ್ಕರೆ ಆಯುಕ್ತರ ಕಚೇರಿ ನಾಮಫಲಕ ಮತ್ತು ಬೋರ್ಡ್ಗೆ ಸೆಗಣಿ ಬಳಿಯಲು ಮುಂದಾದರು. ಸಕಾಲದಲ್ಲಿ ಸೆಗಣಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ವೇಳೆ ಪೊಲೀಸರು ಮತ್ತು ರೈತರ ಮಧ್ಯ ವಾಗ್ವಾದ ನಡಿತು. ಬಳಿಕ ಸಕ್ಕರೆ ಆಯುಕ್ತರ ಬೋರ್ಡ್ಗೆ ಕೆಸರು ಹಚ್ಚಿ ರೈತರು ಆಕ್ರೋಶ ಹೊರ ಹಾಕಿದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ರೈತ ಮುಖಂಡ ಚೂನಪ್ಪ ಪೂಜಾರಿ ಸೇರಿ ಹತ್ತಕ್ಕೂ ಅಧಿಕ ರೈತರನ್ನ ಕ್ಯಾಂಪ್ ಪೊಲೀಸರು ವಶಕ್ಕೆ ಪಡೆದುಕೊಂಡರು.
ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ ಕಳೆದ ಎರಡು ತಿಂಗಳಿನಿಂದ ರಾಜ್ಯದ ಅನೇಕ ಕಡೆ ರೈತರು ಹೋರಾಟ ಮಾಡುತ್ತಿದ್ದಾರೆ. ಆದರೆ ಈವರೆಗೂ ಮುಖ್ಯಮಂತ್ರಿಗಳು ಕಬ್ಬಿಗೆ ದರ ಘೋಷಣೆ ಮಾಡಿಲ್ಲ. ಆದರೆ ಈ ಸಂಬಂಧ ಸಚಿವರು ಉಡಾಫೆ ಉತ್ತರ ಕೊಡುತ್ತಿದ್ದಾರೆ. ತಕ್ಷಣವೇ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು 5500 ರೂಪಾಯಿ ದರ ಘೋಷಿಸುವಂತೆ ಆಗ್ರಹಿಸಿದರು.ನಿರಂತರವಾಗಿ ಹೋರಾಟ ಮಾಡಿದರೂ ಕಾರ್ಖಾನೆಗಳ ಕೈಗೊಂಬೆಯಾಗಿರುವ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನಮಗೆ ಸಿಹಿ ಸುದ್ದಿ ಕೊಡುತ್ತೇವೆ ಎಂದು ಮೋಸ ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಿನ್ನಪ್ಪ ಪೂಜಾರಿ ರಾಜ್ಯ ಉಪಾಧ್ಯಕ್ಷರಾದ ಶಿವಾನಂದ್ ಮುಗಳಿಹಾಳ ಜಿಲ್ಲಾ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ರಾಜೀವ್ ಪವಾರ್ ಸಂಜು ಹವಾನವರ ಪ್ರಕಾಶ್ ನಾಯಕ್ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು