ಬೆಳಗಾವಿ: ಬನಹಟ್ಟಿಯ ರಾಮಪುರ ವ್ಯಾಪಾರಿಗಳಾದ ಖಲೀಲ ರಾಜಣ್ಣವರ, ಮಲಿಕ್ ಮುಲ್ಲಾ ಅರಿಶಿನ ಕೊಳ್ಳಲು ಘಟಪ್ರಭಾ ನಗರಕ್ಕೆ ಬಂದಿದ್ದರು. ತಮ್ಮ ಟಾಟಾ ನೆಕ್ಸಾನ್ ಕಾರಿನಲ್ಲಿ ವಾಪಸ್ಸಾಗುವಾಗ ಘಟಪ್ರಭಾ ಎಡ ದಂಡೆಯ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಉರುಳಿ ಬಿದ್ದಿದೆ. ವ್ಯಾಪಾರಿಗಳಿಬ್ಬರು ಕಾರಿನಿಂದ ಹೊರಗೆ ಬಿದ್ದಿದ್ದಾರೆ. ಮಲ್ಲಿಕ್ ಮುಲ್ಲಾ ಈಜಿ ದಡ ಸೇರಿದ್ದಾರೆ. ಆದರೇ ಈಜು ಬರದೇ ಖಲೀಲ ರಾಜಣ್ಣವರ ನೀರಿನಲ್ಲಿ ಮುಳುಗುತ್ತಿರುವಾಗ ಯುವಕ ಚೇತನ ಒಡೆಯರ ತನ್ನ ಜೀವನದ ಹಂಗು ತೊರೆದು ಖಲೀಲ ಜೀವನವನ್ನು ಉಳಿಸಿ ಸಾಹಸಿ ಎಂದು ಸೈ ಎನಿಸಿಕೊಂಡಿದ್ದಾರೆ.
tv24plus.in > Blog > ಜಿಲ್ಲೆ > ಬೆಳಗಾವಿ > ಕಾಲುವೆಗೆ ಬಿದ್ದ ಕಾರು ಸಾಹಸ ಮೆರೆದೆ ಚೇತನ