ಬೆಳಗಾವಿ

 ತಾಕತ್ ಇದ್ರೆ ಬಹಿರಂಗ ಚರ್ಚೆಗೆ  ಬನ್ನಿ ಸಿಎಂ‌ಗೆ ಮಾಜಿ ಸಿಎಂ ಸಿದ್ದರಾಮಯ್ಯ  ಸವಾಲ್

ಚಿಕ್ಕೋಡಿ:.ಬೆಳಗಾವಿ ಹುಕ್ಕೇರಿ ಪಟ್ಟಣದಲ್ಲಿ ಕಾಂಗ್ರೆಸ್ ಪ್ರಜಾ ಧ್ವನಿ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಬೊಮ್ಮಾಯಿ  ಧಂ ಇದ್ರೆ ತಾಕತ್ ಇದ್ರೆ ಬಹಿರಂಗ ಚರ್ಚೆ ಮಾಡೋಣ ಬನ್ನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಬೊಮ್ಮಾಯಿ ಅವರಿಗೆ ಬಹಿರಂಗ್ ಸವಾಲು ಹಾಕಿದರು ನಾನು ನೀವು ಒಂದೇ ವೇದಿಕೆಗೆ ಬರ್ತಿರಾ ನಿಮ್ಮ ಪ್ರಣಾಳಿಕೆ ತಗೊಂಡ ನೀವು ಬನ್ನಿ ನನ್ನ ಪ್ರಣಾಳಿಕೆ ತಗೊಂಡ ನಾನ್ ಬರ್ತಿನಿ ಎಂದು ಸವಾಲ್ ಎಸೆದರು.
ಪ್ರಮಾಣವಚನ ಸ್ವೀಕರಿಸಿದ ದಿನವೇ ೫ ಯೋಜನೆಗಳ ಜಾರಿಗೆ ತರುವಂತೆ ಆದೇಶ ಮಾಡಿದೆ.ಎಲ್ಲಾ ಧರ್ಮದ ಎಲ್ಲಾ ಜಾತಿಯ ‌ಜನರಿಗೆ ಅನ್ನಭಾಗ್ಯ ಯೋಜನೆ ಮಾಡಿದ್ವಿ.ಲಂಚ ಹೊಡೆಯೋದು ಕಮ್ಮಿ ಮಾಡಿ ಆಗ ಅಕ್ಕಿ ಕೊಡೊಕೆ ಆಗುತ್ತೆ ಅಂತ ಬುದ್ದಿ ‌ಹೇಳಿದೆ.ಇವರ ಮನೆ‌ ಹಾಳಾಗಾ ೭ ಕೆಜಿ ಅಕ್ಕಿಯಿಂದ ೫ ಕೆಜಿಗೆ ಇಳಿಸಿದ್ದಾರೆ ಎಂದು ಮಾಜಿ ಸಿ ಎಂ ಸಿದ್ದು ವಾಗ್ದಾಳಿ ನಡೆಸಿದರು.
ನಾವ್ ಅಧಿಕಾರಕ್ಕೆ ಬಂದ್ರೆ ೧೦‌‌ಕೆಜಿ ಅಕ್ಕಿ ನೀಡುತ್ತೆವೆ. ರೈತರ ಸಾಲ ಮನ್ನಾ ಮಾಡಿ ಅಂದ್ರೆ ಯಡಿಯೂರಪ್ಪ ನೋಟ್ ಪ್ರಿಂಟ್ ಮಾಡುವ ಯಂತ್ರ ಇಲ್ಲ ಅಂತ ಹೇಳಿದ್ರು.ನಾನು ಬರಗಾಲದ ಸಮಯದಲ್ಲಿ ೨೨ ಲಕ್ಷಕ್ಕೂ ಹೆಚ್ಚು ರೈತರರ ೮೧೬೫ ಕೋಟಿ ಸಾಲ ಮನ್ನಾ ಮಾಡಿದೆ.ಮನಮೋಹನ್ ಸಿಂಗ್ ಅವರು ೭೨ ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ರು.ಆದರೆ ಇವರು ಅಂಬಾನಿ ಅಧಾನಿಯವರ ಸಾಲ ಮನ್ನಾ ಮಾಡ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ರೆ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ‌ಸೂರ್ಯ ಹೇಳ್ತಾರೆ.ರೈತರ ‌ಸಾಲ‌ ಮನ್ನಾ ಮಾಡಿದ್ರೆ ದೇಶ ಹಾಳಾಗುತ್ತೆ ಅಂತ ಸ್ಟೇಟ್ಮೆಂಟ್ ಮಾಡಿದ್ದಾರೆ.ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಮಿಷನ್ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ನರೇಂದ್ರ ಮೋದಿ ನಾ ಕಾವೂಂಗಾ ನಾ ಕಾನೇದೂಂಗಾ ಅಂತ ಹೇಳಿ ಚೌಕಿದಾರ ಅಂತ ಹೇಳಿದ್ದರು
ಅವರು ಚೌಕಿದಾರ್  ಕೆಲಸ ಮಾಡ್ತಿದ್ದಾರಾ? ೪೦ ಪರ್ಸಂಟ್ ಕಮಿಷನ್ ನೋಡ್ತಾ ಕೂತಿದ್ದಾರೆ.
ಪತ್ರ ಬರೆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ‌ ಎಂದ ಮೇಲೆ ಭ್ರಷ್ಟಾಚಾರಕ್ಕೆ ಅವರದ್ದು ಕುಮ್ಮಕ್ಕಿದೆ ಎಂದರ್ಥ ಆಲ್ವಾ?? ಅದಕ್ಕೆ ಈ ಸರ್ಕಾರವನ್ನು ನಾನು ಅಲಿಬಾಬಾ ಔರ್ ಚಾಲಿಸ್ ಚೋರ್ ಅಂತ ಕರೀತಿನಿ.ಬಿಜೆಪಿಯವರು ಗೆದ್ದೆಯಿಲ್ಲ ಆದರೂ ಸಹ ವಿಜಯ ಸಂಕಲ್ಪ ಯಾತ್ರೆ ಮಾಡ್ಕೊಂಡ ತಿರುಗುತ್ತಿದ್ದಾರೆ.೨೦೦ ಯೂನಿಟ್ ನಾವ್ ನಿಮಗೆ ಫ್ರಿಯಾಗಿ ಕೊಡ್ತಿವಿ ಎಂದ ಸಿದ್ದರಾಮಯ್ಯ.ಪಂಚಮಸಾಲಿಗಳ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಮಾಡಿದವನು ಸಿದ್ದರಾಮಯ್ಯ ಎಂದ ಸಿದ್ದು ಇವರು ಎಲ್ಲವನ್ನೂ ತಿರುಚುವ ಕೆಲಸ ಮಾಡುತ್ತಿದ್ದಾರೆ.
ಈ ಬಾರಿ ನಾವು ಅಧಿಕಾರಕ್ಕೆ ಬರ್ತಿವಿ ಹುಕ್ಕೇರಿಗೆ ಬೇಕಾದ ಎಲ್ಲಾ ಅಭಿವೃದಿ ಕೆಲಸ ಮಾಡೋಣ ನಮ್ಮನ್ನ ಬೆಂಬಲಿಸಿ ಎಂದು ಮನವಿ ಮಾಡಿದರು.
TV24 News Desk
the authorTV24 News Desk

Leave a Reply