ಬೆಳಗಾವಿ: ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ವಾತಾವರಣ ನಿರ್ಮಾಣವಾಗಿದೆ ಬಿಜೆಪಿ ಸಂಪೂರ್ಣವಾಗಿ ದೂಳಿಪಟ ಆಗುವುದು ನಿಶ್ಚಿತವಾಗಿದೆ ಎಂದು ಹೇಳಿದರು.
ಪ್ರಜಾಧ್ವನಿ ಯಾತ್ರೆಗೆ ಜನರ ಪ್ರತಿಕ್ರಿಯೆ ಹಾಗೂ ಸ್ಪಂದನೆ ಸಿಕ್ಕಿದೆ, ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಯುವಕರು ಭಾಗವಹಿಸುತ್ತಿದ್ದಾರೆ.ಕನಿಷ್ಟ 20 ಸಾವಿರ ಜನ ಬಂದು ವಿಧಾನ ಸಭೆಯಲ್ಲಿ ಜನ ಸೇರುತ್ತಿದ್ದಾರೆ, ಉತ್ಸಾಹ ಹುರುಪುನಿಂದ ಜನರು ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ ಹಾಗೂ ಈ ಜನ ಜಾತ್ರೆ ನೋಡಿದಾಗ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟ ಆಗಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ನನ್ನ ಆಳವಾದ ಭರವಸೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಬರಿ ಗಾಳಿ ಅಲ್ಲಾ ಬಿರುಗಾಳಿನೇ ಬೀಸುತ್ತಿದೆ ಎಂದರು.ಬಿಜೆಪಿ ಅವರು ಹಿಂಬಾಗಲಿಣಿಂದ, ಅನೈತಿಕವಾಗಿ ಅಧಿಕಾರ ಹಿಡಿದಿದ್ದಾರೆ, ಭ್ರಷ್ಟಾಚಾರದಿಂದ ಶಾಸಕರುಗಳನ್ನು ಹಿಡಿದಿಟ್ಟುಕೊಂಡಿದ್ದಾರೆ, ಅದಕ್ಕಾಗಿಯೇ ಪೂರ್ತಿ ನಾಲ್ಕುವರೆ ವರ್ಷಗಳ ಕಾಲ ಬರೇ ಭ್ರಷ್ಟಾಚಾರ ಮಾಡಿ, ಜನರನ್ನು ಬಡವರನ್ನಾಗಿ ಹಾಗೂ ಸಂಪೂರ್ಣವಾಗಿ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
.ನಿನ್ನೆ ಯಡಿಯೂರಪ್ಪನ ಆಪ್ತ ಬಿಜೆಪಿ ಶಾಸಕ ವಿರೂಪಾಕ್ಷ ಅವರ ಪುತ್ರ 40, ಲಕ್ಷ ರೂಪಾಯಿ ಲಂಚ ತಗೆದುಕೊಳ್ಳುವಾಗ ನೇರವಾಗಿ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾನೆ, ಅವನ ಮನೆಯಲ್ಲಿ ಆರು ಕೋಟಿ ಲೆಕ್ಕವಿಲ್ಲದ ಹಣ ಸಿಕ್ಕಿದೆ, ಅದು ಎಲ್ಲಿಂದ ಬಂತು, ಅದು ಭ್ರಷ್ಟ ಹಣವೇಯಾಗಿದೆ ಎಂದರು.ನಾವು ಮಾಡಿದ ಕಾರ್ಯಕ್ರಮಗಳಿಗೆ ಇವರು ಪ್ರಧಾನಿ ಮತ್ತು ಕೇಂದ್ರ ನಾಯಕರನ್ನು ಕರೆದುಕೊಂಡು ಬಂದು ಉದ್ಘಾಟನೆ ಮಾಡುತ್ತಿದ್ದಾರೆ, ಸರ್ಕಾರದ ಹಣವನ್ನು ಪ್ರಚಾರಕ್ಕೆ, ಜಾಹೀರಾತಿಗೆ ಬಳಸಿಕೊಳ್ಳುತ್ತಿದ್ದಾರೆ . ಮೋದಿ ಅವರು ರೋಡ್ ಶೋಗೆ ಜನರನ್ನು 500 ರೂಪಾಯಿ ಕೊಟ್ಟು ಕರೆತರುತ್ತಾರೆ ಎಂದು ಬಸ್ಸಿನ ವಿಡಿಯೋದಲ್ಲಿ ಹೇಳಿದ್ದೆ, ಆದನ್ನು ತಿರುಚಿ ಬಿಜೆಪಿ ಅವರು ಕೆಟ್ಟದಾಗಿ ಪ್ರಚಾರ ಮಾಡುತ್ತಿದ್ದು ಇಂತಹದನ್ನು ಮಾಡಿಯೇ ಅವರು ಅಧಿಕಾರಕ್ಕೆ ಬಂದವರು ಎಂದು ಹೇಳಿದರು.ಮೋದಿ ಅವರು ಏಷ್ಟು ಸುಳ್ಳು ಹೇಳುತ್ತಾರೆ. .ಈ ಸಂದರ್ಭದಲ್ಲಿ ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ, ಜಮಿರ್ ಅಹಮ್ಮದ್, ಡಿ.ಬಿ.ಇಮಾನದಾರ್, ಲಕ್ಷ್ಮಣ ರಾವ್ ಚಿಂಗಳೆ, ಚನ್ನರಾಜ್ ಹಟ್ಟಿಹೊಳಿ, ಅಶೋಕ ಪಟ್ಟಣ್, ರಾಜು ಸೇಠ್ ಸೇರಿದಂತೆ ಅನೇಕಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.