ಬೆಳಗಾವಿ: ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳ ಆದೇಶದಂತೆ ಪಂಚಮಸಾಲಿ ಸಮಾಜಕ್ಕೆ 2 A ಮೀಸಲಾತಿಗೆ ಆಗ್ರಹಿಸಿ ರಾಜ್ಯಾದ್ಯಂತ ಏಕಕಾಲಕ್ಕೆ ರಾಜ್ಯದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ರಾಜ್ಯ ಹೆದ್ದಾರಿಗಳು ಜಿಲ್ಲಾ ರಸ್ತೆ ಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲು ಆದೇಶಿಸಿದ್ದಾರೆ. ಅದರಂತೆ ಹುಕ್ಕೇರಿ ಚಿಕ್ಕೋಡಿ, ನಿಪ್ಪಾಣಿ ರಾಯಬಾಗ್ ತಾಲೂಕಿನ ಸಮಾಜದ ಬಾಂಧವರು NH 4 ಹತ್ತರಗಿ ಟೋಲ್ ನಾಕಾ ಬಂದ್ ಮಾಡುವ ಮೂಲಕ ಪ್ರತಿಭಟನೆಯಾನ್ನು ಶನಿವಾರ ದಿನಾಂಕ 4-3-2023ರ ಬೆಳಿಗ್ಗೆ 10-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರಣ ಎಲ್ಲ ಪಂಚಮಸಾಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆಯನ್ನು ಬೆಳಗಾವಿ ಜಿಲ್ಲೆ ಗೌರವಾಧ್ಯಕ್ಷರಾದ ಪಂಚಮಸಾಲಿ ಸಮಾಜ ಮೀಸಲಾತಿ ಆರ್ ಕೆ ಪಾಟೀಲ್ ಹಾಗೂ ಶಿವಗೌಡ (ಗುಂಡು)ಪಾಟೀಲ್ ಜಿಲ್ಲಾಅಧ್ಯಕ್ಷರು ಪಂಚಮಸಾಲಿ ಸಮಾಜ ಯುವ ಘಟಕ ಬೆಳಗಾವಿ ಜಿಲ್ಲೆ ಇವರ ನೇತೃತ್ವದಲ್ಲಿ ನಡೆಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೃದಯವಿಲ್ಲದ ಈ ಸರ್ಕಾರದ ಸಿಎಂ ಹಾಗೂ ಸಚಿವರುಗಳು ಈ ಬಗ್ಗೆ ನಮ್ಮ ಜಗದ್ಗುರುಗಳ ಜೊತೆಯಲ್ಲಿ ಅಥವಾ ಸಮಾಜದ ಹಿರಿಯ ಹೋರಾಟ ಗಾರರೊಂದಿಗೆ ಯಾವುದೇ ಸ್ಪಂದನೆಯನ್ನು ಮಾಡದೇ
.ನಮ್ಮ ಜಗದ್ಗುರುಗಳನ್ನು ನಡು ಬೀದಿಯಲ್ಲಿ ಕುಳ್ಳಿರಿಸಿರುವುದು ಕಂಡರೆ , ಬೊಮ್ಮಾಯಿಯವರ ನಡವಳಿಕೆ ನಮ್ಮ ಸಮಾಜದ ವಿರೊಧೀ ನಡವಳಿಕೆಯಾಗಿದೆ. ಹಾಗೂ ನಿರ್ಲಕ್ಷ್ಯ ಮಾಡುತ್ತಿರುವುದು ನಮ್ಮ ಸಮಾಜಕ್ಕೆ ಮಾಡಿದ ಘೋರ ಅವಮಾನ .ಆದ್ದರಿಂದ ತಮ್ಮ ಗ್ರಾಮ, ತಾಲೂಕ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ರಸ್ತೆಗಳನ್ನು ಕನಿಷ್ಟ ಒಂದು ಗಂಟೆಯಾದರೂ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಬೇಕಾಗಿ ವಿನಂತಿ ಮಾರ್ಚ 15 ರವರೆಗೆ ಸರಕಾರಕ್ಕೆ ಕಲಾವಕಾಶ ನೀಡಲಾಗಿದೆ. ಒಂದು ವೇಳೆ ಮೀಸಲಾತಿ ಅನುಷ್ಟಾನಗೊಳಿಸದಿದ್ದರೆ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸರ್ಕಾರ ಮಾಡಿರುವ ಅನ್ಯಾಯಗಳನ್ನು ಜನತಾ ನ್ಯಾಯಲಯ ಮುಂದೆ ಪ್ರತಿಪಾದನೆ ಮಾಡಲಾಗುವುದು ಇದೆ ವೇಳೆ ತಿಳಿಸಿದ್ದಾರೆ.