ಖಾನಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಜಾಧ್ವನಿಯಾತ್ರೆ ಇಂದು ಬೆಳಗಾವಿ ಖಾನಾಪುರ ತಾಲೂಕಿನ ಪ್ರವೇಶ ಮಾಡಿದ ಖಾನಾಪುರ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅದ್ದೂರಿಯಾಗಿ ಸ್ವಾಗತ ಮಾಡಿದರು.
ಇದೇ ಸಂದರ್ಭದಲ್ಲಿ ಖಾನಾಪುರ್ ಬಸವೇಶ್ವರ ವೃತ್ತದಲೇ ಬಸವಣ್ಣನವರ ಮೂರ್ತಿಗೆ ಒಂದಿಸಿ ಡಾ. ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ನಮನ ಸಲ್ಲಿಸಿ ಯಾತ್ರೆಯನ್ನು ಪ್ರಾರಂಭ ಮಾಡಿದರು.
ಖಾನಾಪುರ ಮಾರ್ಗವಾಗಿ ದಿಂದ ಬಿಡಿ ಯಾತ್ರೆ ಸಾಗಿತು ಮಧ್ಯದಲ್ಲಿ ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಮಾಧಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಸಮಾಧಿ ದರ್ಶನ ಪಡೆದರು ಸಲ್ಲಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸನ ಮುಖಂಡರುಗಳಾದ ಹಾಗೂ ಕೆ ಪಿ ಸಿ ಸಿ ಕಾರ್ಯಧ್ಯಕ್ಷರಾದ ಸತೀಶ್ ಜಾರಕಿಹೊಳಿ .ಶಾಸಕ ಜಮೀರ್ ಅಹಮದ್ ವಿಧಾನ ಪರಿಷತ್ ಸದಸ್ಯರಾಗಳಾದ ರಾಥೋಡ್ ಮಾಜಿ ಶಾಸಕರುಗಳಾದ ಕೋನ್ ರೆಡ್ಡಿ ,ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷೆ ವಿನಯ್ ನವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣ್ ರಾವ್ ಚಿಂಗಳೆ ಹಾಗೂ ಅನೇಕ ಕಾಂಗ್ರೆಸ್ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು