ಬೆಳಗಾವಿ : ರಾಮದುರ್ಗ ತಾಲೂಕಿನ ಮುದ್ದೆನೂರು ಗ್ರಾಮದಲ್ಲಿ ಕಲುಷಿತ ನೀರು ಕುಡಿದು ೯೪ ಜನ ಅಸ್ವಸ್ಥರಾಗಿದ್ದು,ಓರ್ವ ವೃದ್ಧ ಸಾವನ್ನಪ್ಪಿದ್ದಾನೆ. ಕುಡಿಯುವ ನೀರಿನ ಪೈಪನಲ್ಲಿ ಚರಂಡಿಯ ಕಲುಷಿತ ನೀರು ಮಿಶ್ರಣ ಗೊಂಡಿರುವುದರಿಂದ ಕಲುಷಿತ ನೀರು ಕುಡಿದು ೯೪ ಜನರು ಅಸ್ವಸ್ಥಗೊಂಡಿದ್ದಾರೆ. ಮುದ್ದೆನೂರು ಗ್ರಾಮದ ೭೦ ವಯಸ್ಸಿನ ಶಿವಪ್ಪ ಶಿವಪ್ಪ ಬೆಳ್ಳೆರಿ ಎಂಬ ವ್ಯಕ್ತಿ ಮೃತಪಟ್ಟಿದ್ದು, ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಸರಕಾರದಿಂದ ಘೋಷಣೆ ಮಾಡಲಾಗಿದೆ
ಪ್ರಕರಣ ಸಂಬಂಧ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮೃತರ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ ನೀಡಲು ಸೂಚಿಸಿರುವುದಾಗಿ ಹೇಳಿದ್ದಾರೆ. ಅಲ್ಲದೆ ಈಗಾಗಲೇ ಸೂಕ್ತ ಚಿಕಿತ್ಸೆ ಬಗ್ಗೆ ಸೂಚನೆಯನ್ನು ಕೂಡಾ ನೀಡಿರುವುದಾಗಿ ತಿಳಿಸಿದರು.