ಬೆಳಗಾವಿ: ಗ್ರಾಮೀಣ ಕ್ಷೇತ್ರದ ಹಿಂಡಲಗಾ ವಿಜಯ ನಗರದ ನೂತನ ಉದ್ಯಾನ ನಿರ್ಮಾಣಕ್ಕಾಗಿ 50 ಲಕ್ಷ ರೂ,ಗಳು ಮಂಜೂರಾದ ಹಿನ್ನೆಲೆಯಲ್ಲಿ ಇವತ್ತು ಉದ್ಯಾನ ನಿರ್ಮಾಣದ ಕಾಮಗಾರಿಗಳಿಗೆ ಸ್ಥಳೀಯ ನಿವಾಸಿಗಳ ಹಾಗೂ ಮುಖಂಡರ ಸಮ್ಮುಖದಲ್ಲಿ ಇಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ವಿಠ್ಠಲ ದೇಸಾಯಿ, ರಾಹುಲ ಉರಣಕರ, ಚೇತನಾ ಅಗಸ್ಗೆಕರ್, ಪ್ರವೀಣ ಪಾಟೀಲ, ಡಿ ಬಿ ಪಾಟೀಲ, ಗಜಾನನ ಬಾಂಡೇಕರ್, ಸೀಮಾ ದೇವಕರ, ರೇಣುಕಾ ಭಾತ್ಕಂಡೆ, ಅಲ್ಕಾ ಕಿತ್ತೂರ, ಪ್ರೇರಣಾ ಮೀರಜಕರ, ಗಜಾನನ ಕಣಬರಕರ, ತುಕಾರಾಂ ಪಡಕೆ, ಭರಮಣ್ಣ ಪಾಟೀಲ, ಸುನಿಲ ಶಿಂಧೆ, ಸದಾನಂದ ಶಿಂಧೆ, ಮೋಹನ ಸಾಂಬ್ರೆಕರ್, ವಿನಾಯಕ ಹರಿಹರ, ಸಂತೋಷ ಫರ್ನಾಂಡಿಸ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.